ಧರಣಿ ಮಂಡಲ ಮಧ್ಯದೊಳಗೆ ಎಂಬ ಚಿತ್ರದ ಮೂಲಕ ಗಮನ ಸೆಳೆದ ತಂಡ ಹೊಸ ಚಿತ್ರ ನಿರ್ಮಾಣಕ್ಕೆ ಮುಂದಾಗಿ ಶೀರ್ಷಿಕೆ ಅನಾವರಣಗೊಳಿಸಿದೆ.
ಆದರೆ ಶೀರ್ಷಿಕೆಯ ಪೂರ್ಣ ಹೆಸರು ಹೇಳದೆ ‘ಕೆ ಎ’ ಎಂದಷ್ಟೇ ಹೇಳಿ ತಂಡ ಪ್ರಚಾರದಲ್ಲಿ ತೊಡಗಿದೆ.
ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಸಂತೋಷ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ.
ಯಶ್ ಶೆಟ್ಟಿ ಹಾಗೂ ಸಿದ್ದು ಮೂಲಿಮನಿ ಮುಖ್ಯ ಪಾತ್ರದಲ್ಲಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ, ಬಕ್ಕೇಷ್ ಹಾಗೂ ಕಾರ್ತೀಕ್ ಚಿನ್ನೋಜಿ ರಾವ್ ಸಂಗೀತ ನಿರ್ದೇಶಕರು, ಗೌಸ್ ಪೀರ್ ಗೀತ ರಚನೆ, ಉಜ್ವಲ್ ಚಂದ್ರ ಸಂಕಲನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.