Snehapriya.com

June 10, 2025

ಯಾರು ಹಿತವರು ಮೂವರೊಳಗೆ ಅಜನೀಶ್ ಜಸ್ಟ್ ಮ್ಯಾರೀಡ್ ಕಥನ

Social Share :

ದಕ್ಷಿಣ ಭಾರತದ ಆ ಮೂವರು ನಿರ್ದೇಶಕರು ಪರಸ್ಪರ ಹೊಗಳಿಕೊಂಡರು. ರಿಯಲ್ ಸ್ಟಾರ್ ಅಲ್ಲಿ ಕೇಂದ್ರ ಬಿಂದು..

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ನಿಥಿಲನ್, ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ಅಜಯ್ ಭೂಪತಿ ಇಬ್ಬರೂ ನಮಗೆ ಉಪೇಂದ್ರ ಅವರೇ ಸ್ಫೂರ್ತಿ ಎಂದರು.

ಈ ಮೂವರು ದಿಗ್ಗಜರನ್ನು ಒಟ್ಟಿಗೆ ಸೇರಿಸಿದವರು ಸದ್ಯದ ಬ್ಯುಸಿಯಸ್ಟ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅದು ಅವರದೇ ನಿರ್ಮಾಣದ ‘ಜಸ್ಟ್ ಮ್ಯಾರೀಡ್’ ಎಂಬ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ.

ಚಿತ್ರವನ್ನು ಅಜನೀಶ್ ಲೋಕನಾಥ್ ಸಂಗಾತಿ ಸಿ.ಆರ್.ಬಾಬಿ ನಿರ್ದೇಶನ ಮಾಡಿದ್ದು, ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಮುಖ್ಯ ಪಾತ್ರದಲ್ಲಿದ್ದಾರೆ.

ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ ಮೂವರು ಟೀಸರ್ ಬಿಡುಗಡೆ ಮಾಡಿದ ಆ ಸಂದರ್ಭ ದಕ್ಷಿಣ ಭಾರತದ ಮುಂಚೂಣಿಯ ಕ್ರಿಯಾಶೀಲ ವ್ಯಕ್ತಿಗಳ ಸಂಗಮವಾಗಿತ್ತು.

ಉಪೇಂದ್ರ ಅವರ ‘ಎ’ ಸಿನಿಮಾ ನೋಡಿ ನಿರ್ದೇಶನದ ಆಸೆ ಹೊತ್ತೆ ನಾನು ಎಂದ ಅಜಯ್ ಭೂಪತಿ, ಆ ಸಿನಿಮಾದ ‘ಸುಮ್ ಸುಮ್ನೆ.. ನಗ್ತಾಳೆ..’ ಹಾಡಿನ ತೆಲುಗು ಅವತರಣಿಕೆ ಹಾಡಿ ತೋರಿಸಿದರು.

ನಿಥಿಲನ್ ಅಂತೂ ನನ್ನ ಎಲ್ಲಾ ಚಿತ್ರಗಳಿಗೂ ಉಪೇಂದ್ರ ಅವರೇ ಸ್ಫೂರ್ತಿ ಎಂದರೇ.. ಉಪೇಂದ್ರ ಮಾತ್ರ ಇವರೇನು ಸಾಮಾನ್ಯರಲ್ಲ; ನಿಥಿಲನ್ ‘ಮಹಾರಾಜ’ ಹಾಗೂ ಅಜಯ್ ಭೂಪತಿ ಅವರ ‘ಮಂಗಳ ವಾರಂ’ ಸಾಮಾನ್ಯ ಸಿನಿಮಾಗಳಲ್ಲ ಎಂದು ಕೊಂಡಾಡಿದರು.

ಅಜನೀಶ್ ಅದ್ಭುತ ಕೆಲಸಗಾರ. ಅವರು ಕೈ ತುಂಬಾ ಕೆಲಸಗಳಿದ್ದರೂ ಎಲ್ಲರಿಗೂ ಸಿಗುವಷ್ಟು ಸಹೃದಯಿ ಎಂದರು ಉಪೇಂದ್ರ.

ಅಜನೀಶ್ ಲೋಕನಾಥ್ ಅವರ ತಂದೆ – ತಾಯಿ ಹಾಗೂ ಈಗಷ್ಟೇ ಮದುವೆಯಾಗಿರುವ ನೂತನ ದಂಪತಿಗಳನ್ನು ಸನ್ಮಾನಿಸಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಿನಿಮಾ ನಿರ್ದೇಶನ ನನ್ನ ಬಹು ವರ್ಷಗಳ ಕನಸು. ಅದನ್ನು ಅಜನೀಶ್ ಸಾಧ್ಯವಾಗಿಸಿದ್ದಾರೆ ಎಂದರು ಸಿ.ಆರ್.ಬಾಬಿ.

ಮುಖ್ಯ ಪಾತ್ರದಲ್ಲಿರುವ ಶೈನ್ ಶೆಟ್ಟಿ, ಅಂಕಿತ ಅಮರ್, ಸಂಗೀತ ನಿರ್ದೇಶಕ ಕೆ.ಕಲ್ಯಾಣ್,
ಹಿರಿಯ ನಟಿ ಶ್ರುತಿ‌, ರವಿಶಂಕರ್ ಗೌಡ, ಶ್ರೀಮಾನ್, ವಾಣಿ ಹರಿಕೃಷ್ಣ, ಸಾಕ್ಷಿ ಅಗರವಾಲ್ ಮೊದಲಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಸೇರಿದಂತೆ ಅನೇಕ ತಂತ್ರಜ್ಞರು ಮಾತನಾಡಿದರು.

ಆನಂದ್ ಆಡಿಯೋ ಸಂಸ್ಥೆಯ ಆನಂದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಿರಿಯ ನಟ ದೇವರಾಜ್, ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *