ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ 125 ನೇ ಚಿತ್ರ ಬಿಡುಗಡೆ ಕಾಣುತ್ತಿದೆ..
ಅಚ್ಚರಿಯ ಬೆಳವಣಿಯಲ್ಲಿ ಗೀತಾ ಶಿವರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ..
ಅದೇ ವೇದ..!
ಭಜರಂಗಿ ಸರಣಿ ಖ್ಯಾತಿಯ ಹರ್ಷ ನಿರ್ದೇಶನ ಮಾಡಿರುವ ಈ ಚಿತ್ರ ಅನೇಕ ಕಾರಣಗಳಿಗಾಗಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ..
ಮುಖ್ಯವಾಗಿ ಶಿವಣ್ಣ ಅವರ 125ನೇ ಚಿತ್ರವಿದು.. ಒಬ್ಬ ಮುಂಚೂಣಿಯ ಸೂಪರ್ ಸ್ಟಾರ್ ಇಷ್ಟು ಚಿತ್ರಗಳಲ್ಲಿ ಅಭಿನಯಿಸುವುದು ಮತ್ತು ಸ್ಟಾರ್ ಗಿರಿ ಕಾಪಾಡಿಕೊಳ್ಳುವುದು ಸಾಮಾನ್ಯ ವಿಷಯವೇ ಅಲ್ಲ..
ಆದರೆ ತಮ್ಮ ಸರಳ ಸುಂದರ ನಡೆಯಿಂದ ಜನಮನ ಗೆದ್ದಿರುವ ಶಿವಕುಮಾರ್ ಅವರ ವೇಗ ಈಗ ವೇದದವರೆಗೂ ಬಂದಿದೆ. ಶಿವಣ್ಣ ಸ್ಟಾರ್ ವರಸೆಯಲ್ಲಿ ಅದೇ ಜನಪ್ರಿಯತೆಯ ತುತ್ತ ತುದಿಯಲ್ಲಿರುವುದು ವಿಶೇಷದಲ್ಲಿ ವಿಶೇಷ..
ವೇದ ಈಗ ಅಭಿಮಾನಿಗಳಲ್ಲಿ ಹೊಸ ಪುಳಕ ಭಾವಗಳನ್ನು ನೀಡಿದೆ.. ಅದನ್ನು ಮೀರಿದ ವಿಚಾರವೆಂದರೆ, ಶಿವಣ್ಣ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಎಲ್ಲರ ಜೊತೆ ಬೆರೆಯುತ್ತಿದ್ದಾರೆ. ಹಾಗಾಗಿ ಚಿತ್ರದ ನಿರೀಕ್ಷೆ ಹೆಚ್ಚಾಗಿದೆ. ಅಭಿಮಾನಿಗಳ ಕುತೂಹಲ ಕೂಡ ಮೇರೆ ಮೀರಿದೆ.
ಡಿಸೆಂಬರ್ 23 ರಂದು ‘ವೇದ’ ಹಬ್ಬ ಆಚರಿಸಲು ಸಜ್ಜಾಗಿರುವ ಅಭಿಮಾನಿಗಳಿಗೆ, ಈ ಚಿತ್ರ ಅಣ್ಣನ ಸ್ವಂತ ಬ್ಯಾನರ್ ಎಂಬುದು ಮತ್ತೊಂದು ಖುಷಿ.
ನಿರ್ದೇಶಕ ಹರ್ಷ ತಮ್ಮ ಎಂದಿನ ಕ್ರಿಯಾಶೀಲ ನಡೆಯಲ್ಲಿದ್ದರೂ ವೇದ ಅವರ ಬಹು ನಿರೀಕ್ಷೆಯ ಚಿತ್ರವಾಗಿದೆ. ಅರ್ಜುನ್ ಜನ್ಯ ಸಂಗೀತ, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ , ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ರವಿ ಸಂತೆಹಕ್ಲು ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ, ಪ್ರಸನ್ನ, ಕುರಿ ಪ್ರತಾಪ್, ಲಾಸ್ಯ ನಾಗರಾಜ್, ಭರತ್ ಸಾಗರ್, ಸಂಜೀವ್, ಚಾರ್ವಿ ಗೌಡ, ಜಗಪ್ಪ, ಚೇತನ ಹರಿ ಚಿತ್ರದ ತಾರಾಬಳಗದಲ್ಲಿದ್ದಾರೆ.