Snehapriya.com

June 8, 2025

ಸಾಂಪ್ರದಾಯಿಕ ನಂಬಿಕೆಗಳ ಸುತ್ತಲಿನ ಅಸಹಾಯಕತೆ..

Social Share :

ಜೀವನ ಸಾಗಿಸಲು ಕ್ರಮಬದ್ಧವಾದ ಕೆಲಸ ಇಲ್ಲದಾಗ, ಮನಸ್ಸಿನ ತುಂಬೆಲ್ಲಾ ಅಸಹಾಯಕತೆ ಮನೆ ಮಾಡಿದಾಗ, ಬರೀ ಭರವಸೆಗಳ ಸುತ್ತ ಹೊಸೆಯುವ ಕನಸುಗಳು ಅಷ್ಟು ಸುಲಭವಾಗಿ ಕೈಗೂಡುವುದಿಲ್ಲ..

ಅದನ್ನು ಬೇಕಾದರೆ ಹಣೆ ಬರಹ ಅನ್ನಬಹುದು.. ಇಲ್ಲಿನ ಕಥಾ ನಾಯಕನೂ ಹಾಗೆಯೇ.. ಹಣೆ ಬರಹ ಮೆಚ್ಚಿ ಶಾಸ್ತ್ರಗಳ ಮೂಲಕ ಭವಿಷ್ಯದ ಹುಡುಕಾಟ ನಡೆಸುವವನು..

ಹೆಸರು ಹರೀಶ ವಯಸ್ಸು 36.. ಅದರ ಜೊತೆಗೆ ಅಮರಿಕೊಂಡಿರುವ ಸಕ್ಕರೆ ಕಾಯಿಲೆ.. ಮನೆ ತೋರಿಸುವ ಬ್ರೋಕರ್ ಕೆಲಸ. ಹುಡುಗಾಟ, ಹುಡುಕಾಟದಲ್ಲೇ ವಯಸ್ಸು ಮತ್ತು ಕಾಯಿಲೆ ಶಾಪವಾಗಿ ಆವರಿಸಿಕೊಂಡಿರುವುದು ತಿಳಿಯುವುದೇ ಇಲ್ಲ.

ವಯಸ್ಸಾದ ಮತ್ತು ಕಿವಿ ಕೇಳದ ಅಪ್ಪ; ಸ್ವಂತ ಮನೆ ಜೊತೆಗೊಬ್ಬ ಉಂಡಾಡಿ ಸ್ನೇಹಿತ. ಇಂತಹ ಪರಿಸರದಲ್ಲಿ ಹರೀಶನ ಮದುವೆಗೆ ವಧುವಿನ ಹುಡುಕಾಟ ನಡೆಯುತ್ತದೆ.. ಅನೇಕ ಕಡೆ ಹಾಸ್ಯ ಪ್ರಹಸಗಳೂ ಆಗುತ್ತವೆ.

ಕೊನೆಗೆ ಒಬ್ಬ ಹುಡುಗಿ ಸಿಗುತ್ತಾಳೆ. ಅದರ ನಡುವೆ ಅಪ್ಪ ಇಲ್ಲವಾಗುತ್ತಾರೆ. ಹುಡುಗಿಯ ಪ್ರೇರಣೆಯಿಂದ ಹರೀಶ ಕಾರು ಕೊಳ್ಳುವ ಮಟ್ಟಕ್ಕೆ ಬೆಳೆಯುತ್ತಾನೆ. ಆದರೆ ಹುಡುಗಿ ಮದುಯಾಗಲು ಸಿಗದೆ ತಪ್ಪಿ ಹೋಗುತ್ತಾಳೆ.. ಹೀಗೆ ಸಾಗುವ ಕಥೆ ಜಾಡಿನಲ್ಲಿ ಪ್ರತಿಯೊಬ್ಬರಿಗೂ ಇದು ನಮ್ಮ ಕಥೆ ಎನಿಸುವಷ್ಟು ಆಪ್ತವಾಗುತ್ತದೆ.

ಪುನೀತ್ ರಾಜ್‍ಕುಮಾರ್ ಅವರು ಹಾಡಿರುವ ‘ಹರೀಶಣ್ಣಂಗೆ ವಯಸ್ಸು 36.. ಮದುವೆಯಾಗ್ಲಿಲ್ಲಾಂಥ ಬೇಜಾರು..’ ಚಿತ್ರದ ಹೈಲೈಟ್. ಸಂಗೀತ ನಿರ್ದೇಶನ ಮಾಡಿರುವ ನಿರ್ದೇಶಕ ಗುರುರಾಜ್ ಚಿತ್ರಕ್ಕೊಂದು ನೈಜತೆಯನ್ನು ಕಟ್ಟಿಕೊಟ್ಟಿದ್ದಾರೆ. ನಿರ್ಮಾಪಕ ಲಕ್ಷ್ಮಿಕಾಂತ್ ರಾವ್ ಹಾಡಿರುವ ಹಾಡು ಸುಮಧುರತೆ ಕಾಯ್ದುಕೊಂಡಿದೆ.

ಮುಖ್ಯ ಪಾತ್ರದಲ್ಲಿ ಯೋಗೀಶ್ ಶೆಟ್ಟಿ ನಟನೆಯಲ್ಲಿ ನೈಜತೆ ಕಾಯ್ದುಕೊಂಡಿದ್ದಾರೆ.‌ ಜೊತೆಗೆ ಎಂ.ಎಸ್.ಉಮೇಶ್, ದೀಪಿಕಾ ರಾಮ್ ಹಾಗೂ ಇತರರ ನಟನೆಯಲ್ಲಿ ಸಹ ನೈಜತೆ ಎದ್ದು ಕಾಣುತ್ತದೆ.

ಇದು ಮನರಂಜನೆ ಪ್ರಧಾನವಾಗಿರುವ ಚಿತ್ರ. ಹಾಗಾಗಿ ಚಿತ್ರ ನೋಡಿ ಒಮ್ಮೆ ನಕ್ಕು ಬರಲು ಅಡ್ಡಿ ಇಲ್ಲ. ಆದರೆ ಮಂಗಳೂರು ಕನ್ನಡದಲ್ಲಿ ಇಣುಕುವ ಬನ್ಸ್, ಗೋಲಿಬಜ್ಜಿ ನೆನಪಾಗಿ ಬಾಯಲಿ ನೀರು ಬಂದರೆ ಅಲ್ಲಿಗೇ ಹೋಗಬೇಕಾಗುತ್ತದೆ..

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *