* ಅಕ್ಟೋಬರ್ 13ಕ್ಕೆ ಬಿಡುಗಡೆ
* ಚಿತ್ರತಂಡದ ಕನ್ನಡಾಭಿಮಾನ
* ಚಿತ್ರತಂಡದ ಕುತೂಹಲದ ನಡೆ
ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ನಿರ್ದೇಶನದ ಹಾಗೂ ಆಕ್ಷನ್ ಕ್ವೀನ್ ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಚಿತ್ರ ‘ಮಾರಕಾಸ್ತ್ರ’ ಬಿಡುಗಡೆ ಒಂದು ವಾರ ಮುಂದೂಡಲ್ಪಟ್ಟಿದೆ.
ಕೋಮಲ್ ಹಾಗೂ ನಟರಾಜ್ ನಿರ್ಮಾಣದ ಈ ಚಿತ್ರ ಇದೇ ಅಕ್ಟೋಬರ್ 13ರಂದು ಬಿಡುಗಡೆ ಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರದಲ್ಲಿ ಮೈನವಿರೇಳಿಸುವ ಸಂಗತಿಗಳಿವೆ. ಹೊಸ ಪ್ರತಿಭೆ ಆರ್ಯ ಹಾಗೂ ಹರ್ಷಿಕಾ ಪೂಣಚ್ಚ ಪಾತ್ರದ ದೃಶ್ಯಗಳು ರೋಚಕವಾಗಿವೆ. ಅಲ್ಲದೆ ನೃತ್ಯ ನಿರ್ದೇಶಕ ಧನುಕುಮಾರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ದುಡಿದಿರುವುದು ವಿಶೇಷ.
ಈ ಮುಂಚೆ ಅಕ್ಟೋಬರ್ 6ರಂದು ಚಿತ್ರವನ್ನು ಬಿಡುಗಡೆ ಮಾಡುವ ಆಶಯ ತಂಡಕ್ಕಿತ್ತು. ಆದರೆ ನಾಡು ನುಡಿ ಹೋರಾಟದಲ್ಲಿ ಕೈ ಜೋಡಿಸಬೇಕು ಎಂಬ ಕಾರಣದಿಂದ ಚಿತ್ರದ ಬಿಡುಗಡೆಯನ್ನು ತಂಡ ಒಂದು ವಾರ ಮುಂದಕ್ಕೆ ಹಾಕಿಕೊಂಡಿದೆ.
ಹಾಗೆ ನೋಡಿದರೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಜೊತೆಗೆ ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ. ಅಲ್ಲದೆ ಮಾಲಾಶ್ರೀ ಅವರ ಅಪ್ರತಿಮ ಹೊಡೆದಾಟದ ದೃಶ್ಯಗಳಿವೆ. ಹಾಗಾಗಿ ಚಿತ್ರವು ವ್ಯಾಪಾರದ ಹಾದಿಯಲ್ಲಿ ಲಾಭದಾಯಕ ಕ್ಷಣಗಳನ್ನು ನೋಡುತ್ತಿದೆ.
ಅಂದ ಹಾಗೆ ಚಿತ್ರವು ಪರಭಾಷೆ ಡಬ್ಬಿಂಗ್ ಹಕ್ಕು ಮಾರಾಟದಲ್ಲಿ ಲಾಭ ಮಾಡಿಕೊಂಡಿದೆ. ಹಿಂದಿ ಡಬ್ಬಿಂಗ್ ರೈಟ್ಸ್ ಉತ್ತಮ ಬೆಲೆಗೆ ಮಾರಾಟವಾಗಿದೆ. ಚಿತ್ರದ ಬಗ್ಗೆ ಅಪಾರ ವಿಶ್ವಾಸವನ್ನು ಚಿತ್ರ ತಂಡ ಹೊಂದಿದೆ.
ಮುಖ್ಯವಾಗಿ ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ನಿರ್ದೇಶನದ ವಿಷಯದಲ್ಲಿ ವಿನೂತನ ಆಶಯಗಳನ್ನು ಮೆರೆದಿದ್ದಾರೆ. ಹಾಗಾಗಿ ನಿರ್ಮಾಣ ವಿಷಯದಲ್ಲಿ ಚಮತ್ಕಾರಗಳೇ ನಡೆದು ಹೋಗಿವೆ.
ಹಾಗಾಗಿ ‘ಮಾರಕಾಸ್ತ್ರ’ ಯಾವ ದೃಷ್ಟಿಯಲ್ಲಿ ಹೊಸ ನಿರ್ದೇಶಕ ಅಥವಾ ಮೊದಲ ನಿರ್ದೇಶನದ ನಿರ್ದೇಶಕ ಎನಿಸುವುದಿಲ್ಲ. ಪಳಗಿದ ನಿರ್ದೇಶಕನೊಬ್ಬ ಅತಿಯಾದ ಆತ್ಮ ವಿಶ್ವಾಸದಿಂದ ಚಿತ್ರ ಮಾಡುವಂತೆಯೇ ಗುರುಮೂರ್ತಿ ಸುನಾಮಿ ನಿರ್ದೇಶನ ಮಾಡಿದ್ದಾರೆ.