ಮುಂಬೈನಲ್ಲಿ ಫೈಟ್ ಮಾಡುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡಿರುವ ದಿಗಂತ್ ತಮ್ಮ ಯಡವಟ್ ಸಾಹಸಗಳನ್ನು ಮತ್ತೆ ಮುಂದುವರೆಸಿದ್ದರಿಂದ ಮತ್ತೆ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಗೋವಾ ಪ್ರವಾಸ ಸಂದರ್ಭದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ದಿಗಂತ್ ಸಮುದ್ರ ದಡದಲ್ಲಿ ಈಜುವ ಸಲುವಾಗಿ ಉಲ್ಟಾ ಹಾರಲು ಹೋಗಿ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ.
ದಿಗಂತ್ ಗೆ ಆಪರೇಷನ್ ಅನಿವಾರ್ಯತೆ ಹಿನ್ನೆಲೆಯಲ್ಲಿ ತುರ್ತು ವಿಮಾನದ ಮೂಲಕ ಬೆಂಗಳೂರಿಗೆ ಕರೆ ತರಲಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಗುರಿಪಡಿಸಲಾಗಿದೆ.
ದಿಗಂತ್ ಖಂಡಿತಾ ಗುಣಮುಖರಾಗುತ್ತಾರೆ. ಆದರೆ ಕೆಲವೊಮ್ಮೆ ಇಂತಹ (ಸಮ್ಮರ್ ಶಾಟ್) ಸಾಹಸಗಳು ಬೇಕಿತ್ತಾ ಎನಿಸುತ್ತದೆ. ಏಕೆಂದರೆ ದಿಗಂತ್ ಕಣ್ಣಿನ ವಿಷಯ ಬಲ್ಲವರಿಗೆ ಖಂಡಿತಾ ಹಾಗೆನಿಸುತ್ತದೆ..
ಬದುಕಿಗಾಗಿ ಏನಾದರೂ ಸಾಹಸ ಮಾಡಿದರೆ ಅದು ಒಂದು ರೀತಿಯಲ್ಲಿ ಪ್ರಶಂಸೆಗೆ ಪಾತ್ರವಾಗಬಹುದು. ಆದರೆ ಇನ್ನೂ ಹುಡುಗಾಟವೇ ಜೀವನ ಎಂದುಕೊಂಡವರು ಸದಾ ಯಡವಟ್ ರಾಜಾ ಆಗುತ್ತಾ ಹೋಗಬಹುದು..
ದೂದ್ ಪೇಡಾ ದಿಗಂತ್ ಕುಟುಂಬದ ಜೊತೆ ವಿಹಾರಕ್ಕೆಂದು ಗೋವಾಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂಬುದು ಮಾಹಿತಿ.