ಕನ್ನಡದಲ್ಲಿ ಅಪರೂಪಕ್ಕೆ ಮಹಿಳಾ ಪ್ರಧಾನವಿರುವ ಚಿತ್ರಗಳು ಬರುತ್ತವೆ. ಅಂತಹ ಚಿತ್ರಗಳ ಸಾಲಿಗೆ ಸೇರುವ ಚಿತ್ರವೊಂದು ಈಚೆಗೆ ಸೆಟ್ಟೇರಿದೆ..
‘ಉಳಿದವರಾರು’ ಎಂಬ ಹೆಸರಿನ ಈ ಚಿತ್ರದ ಪೋಸ್ಟರ್ ಬಿಡುಗಡೆಯಲ್ಲಿ ಚಿತ್ರತಂಡ ಖುಷಿಯಿಂದ ವಿವರಗಳನ್ನು ಹಂಚಿಕೊಂಡಿತು..
ಮಹಿಳಾ ಪ್ರಧಾನವಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ತ್ರಿವೇಣಿ ನಟಿಸುತ್ತಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ಬ.ಲ.ರಜವಾಡಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ‘ಬ್ಯುಜಿನೆಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಸತೀಶ್ ಪಾಟೀಲ್ ಈ ಚಿತ್ರದ ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದು, ಹಲವಾರು ಗೆಳೆಯರು ಅವರಿಗೆ ಸಹಾಯ ಹಸ್ತದ ಜೊತೆ ನಿಂತಿದ್ದಾರೆ.
ವಿಶೇಷವಾಗಿ ಪಾಂಡು, ರಘು ಎಂಬುವರು ನಿರ್ದೇಶಕ ಸತೀಶ್ ಪಾಟೀಲ್ ಜೊತೆ ಕೈ ಜೋಡಿಸಿದ್ದಾರೆ. ಇದೇ ತಿಂಗಳಿನಲ್ಲಿ ಚಿತ್ರೀಕರಣ ನಡೆಸಲು ತಂಡ ಸಜ್ಜುಗೊಂಡಿದೆ.
ಶ್ರೀಮಂತಿಕೆಯ ದರ್ಪದಲ್ಲಿ ತನ್ನ ಕುಟುಂಬ ನಾಶ ಮಾಡಿದ ವ್ಯಕ್ತಿಯ ಮೇಲೆ ಸಿಡಿದೆದ್ದ ಮಹಿಳೆ ಸೇಡು ತೀರಿಸಿಕೊಳ್ಳುವುದೇ ಕಥೆ.
ವಿಕ್ಟರಿ ವಾಸು, ನಾಗೇಂದ್ರ ಅರಸು, ಕೆಂಪೇಗೌಡ, ಕಾಮಿಡಿ ಕಿಲಾಡಿ ಸಂತು ಸೇರಿದಂತೆ ಹಲವಾರು ಕಲಾವಿದರ ತಾರಾಬಳಗವಿದೆ. ಮಸ್ತಾನ್ ಶರೀಫ್ ಛಾಯಾಗ್ರಹಣ, ಗಂಧರ್ವ ಸಂಗೀತ, ಕೌರವ ವೆಂಕಟೇಶ್ ಸಾಹಸ ಚಿತ್ರಕ್ಕಿದೆ.
ನಿರ್ದೇಶಕ ನಾಗಚಂದ್ರ ಪೋಸ್ಟರ್ ಬಿಡುಗಡೆಯ ಮುಖ್ಯ ಅತಿಥಿಯಾಗಿದ್ದರು. ನಾಗೇಂದ್ರ ಅರಸ್, ಕೆಂಪೇಗೌಡ ಸೇರಿದಂತೆ ಹಲವಾರು ಗಣ್ಯರು ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭವನ್ನು ಹಾರೈಸಿದರು.