* ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಂದ ಬಿಡುಗಡೆ
* ಆಯುರ್ವೇದದ ಮಹತ್ವ ಸಾರುವ ಚಿತ್ರ
* ಹಣ ಸುಲಿಯುವ ಔಷಧಗಳ ಬಗ್ಗೆ ಜಾಗೃತಿ
ಮಧುಸೂದನ್ ಸ್ವತಃ ಆಯುರ್ವೇದದ ವೈದ್ಯರು. ವೈದ್ಯ ಪದ್ಧತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ಚಿತ್ರ ಮಾಡಿದ್ದಾರೆ.
ಅದೇ ಮಧುರ ಕಾವ್ಯ..!
ಮಂಗಳವಾರ (ಜುಲೈ 11) ದಂದು ನಡೆದ ಸಮಾರಂಭದಲ್ಲಿ ಚಿತ್ರದ ಟ್ರೈಲರ್ ನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಚಿತ್ರದ ನಟ ಮತ್ತು ನಿರ್ದೇಶಕರಾದ ಮಧುಸೂದನ್ ಅವರು ಆಯುರ್ವೇದ ವೈದ್ಯರು ಎಂಬುದು ಹೆಮ್ಮೆಯ ವಿಷಯವಾಗಿದ್ದು, ಅವರ ಈ ಪ್ರಯತ್ನ ಅನನ್ಯವಾಗಿದೆ ಎಂದರು ದೇವರಾಜ್.
ಈ ದಿನ ಟ್ರೈಲರ್ ಬಿಡುಗಡೆಗೆ ದೇವರಾಜ್ ಅವರು ಬಂದಿರುವುದು ಅತ್ಯಂತ ಖುಷಿ ತಂದಿದೆ ಮತ್ತು ಈ ಪ್ರಯತ್ನದ ಬಗ್ಗೆ ಸಾರ್ಥಕತೆ ಮೂಡಿದೆ ಎಂದರು ನಟ ಕಮ್ ನಿರ್ದೇಶಕ ಮಧುಸೂದನ್.
ಚಿತ್ರದಲ್ಲಿ ಹಣಕ್ಕಾಗಿ ಔಷಧ ಕಂಪನಿಗಳು ಮಾಡುವ ಹಲವು ಹುನ್ನಾರಗಳ ಬಗ್ಗೆಯೂ ಗಮನ ಸೆಳೆಯಲಾಗಿದೆ ಎಂಬ ಮಾಹಿತಿಯನ್ನೂ ಕೊಟ್ಟರು ನಿರ್ದೇಶಕರು.
ಔಷಧಗಳ ಬಳಕೆ ಮತ್ತು ಕಾಯಿಲೆಯ ಸೂಕ್ಷ್ಮತೆಗಳು ಚಿತ್ರದಲ್ಲಿ ವ್ಯಕ್ತವಾಗಿವೆ.
ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ . ಮುಖ್ಯ ಪಾತ್ರಕ್ಕೆ ಜೋಡಿ ಎಂಬುದಿಲ್ಲ; ಅಮ್ಮನಾಗಿ ರಂಗಭೂಮಿ ನಟಿ ಯಶೋಧ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಂತು.
ವಿಲನ್ ಪಾತ್ರದಲ್ಲಿ ರಾಜಕುಮಾರ್ ನಾಯಕ್ ನಟಿಸಿದ್ದು, ಸತೀಶ್ ಮೌರ್ಯ ಚಿತ್ರದ ಸಂಗೀತ ನಿರ್ದೇಶಕರು.