Snehapriya.com

June 8, 2025

ಮಾರಕಾಸ್ತ್ರಗೆ ಶಿವಣ್ಣ ಆಶೀರ್ವಾದ ಚಿತ್ರ ಅಕ್ಟೋಬರ್ 6ಕ್ಕೆ ಬಿಡುಗಡೆ..

Social Share :

* ಮುಖ್ಯ ಪಾತ್ರದಲ್ಲಿ ಮಾಲಾಶ್ರೀ

* ಗುರುಮೂರ್ತಿ ಸುನಾಮಿ ನಿರ್ದೇಶನ

* ಕೋಮಲಾ ನಟರಾಜ್ ನಿರ್ಮಾಣ

* ವಾಮಾಚಾರದ ಸುತ್ತ ಯುವ ಪ್ರೇಮಿಗಳ ಕಥೆ

* ಆರ್ಯ ಹರ್ಷಿಕಾ ಪೂಣಚ್ಚ ಯುವ ಜೋಡಿ ಪಾತ್ರದಲ್ಲಿ

* ಧನುಕುಮಾರ್ ಕ್ರಿಯೇಟಿವ್ ಹೆಡ್

ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ಎಂಬ ನವ ಪ್ರತಿಭೆ ನಿರ್ದೇಶನ ಮಾಡಿರುವ ‘ಮಾರಕಾಸ್ತ್ರ’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹೃದಯ ಪೂರ್ವಕ ಹಾರೈಕೆ ನೀಡಿದ್ದಾರೆ.

ಅವರ ಆಶೀರ್ವಾದದ ಜೊತೆಗೆ ಇದೇ‌ ಅಕ್ಟೋಬರ್ 6ರಂದು ರಾಜ್ಯ ವ್ಯಾಪಿ ಚಿತ್ರವು ಬಿಡುಗಡೆ ಕಾಣುತ್ತಿದೆ. ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಅನೇಕ ರೀತಿಯಲ್ಲಿ ನಿರ್ಮಾಪಕರಿಗೆ ಬಿಡುಗಡೆಗೆ ಮುನ್ನವೇ ಲಾಭ ಮಾಡಿ ಕೊಟ್ಟಿದೆ.

ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಜೊತೆಗೆ ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ. ಅಲ್ಲದೆ ಮಾಲಾಶ್ರೀ ಅವರ ಅಪ್ರತಿಮ ಹೊಡೆದಾಟದ ದೃಶ್ಯಗಳಿವೆ. ಹಾಗಾಗಿ ಚಿತ್ರವು ವ್ಯಾಪಾರದ ಹಾದಿಯಲ್ಲಿ ಲಾಭದಾಯಕ ಕ್ಷಣಗಳನ್ನು ನೋಡುತ್ತಿದೆ.

ಅಂದ ಹಾಗೆ ಚಿತ್ರವು ಪರಭಾಷೆ ಡಬ್ಬಿಂಗ್ ಹಕ್ಕು ಮಾರಾಟದಲ್ಲಿ ಲಾಭ ಮಾಡಿಕೊಂಡಿದೆ. ಹಿಂದಿ ಡಬ್ಬಿಂಗ್ ರೈಟ್ಸ್ ಉತ್ತಮ ಬೆಲೆಗೆ ಮಾರಾಟವಾಗಿದೆ ಎಂಬುದು ಚಿತ್ರತಂಡದ ಆತ್ಮವಿಶ್ವಾಸದ ವಿವರ.

ಮುಖ್ಯವಾಗಿ ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ನಿರ್ದೇಶನದ ವಿಷಯದಲ್ಲಿ ವಿನೂತನ ಆಶಯಗಳನ್ನು ಮೆರೆದಿದ್ದಾರೆ. ಹಾಗಾಗಿ ನಿರ್ಮಾಣ ವಿಷಯದಲ್ಲಿ ಚಮತ್ಕಾರಗಳೇ ನಡೆದು ಹೋಗಿವೆ.

ಹಾಗಾಗಿ ‘ಮಾರಕಾಸ್ತ್ರ’ ಯಾವ ದೃಷ್ಟಿಯಲ್ಲಿ ಹೊಸ ನಿರ್ದೇಶಕ ಅಥವಾ ಮೊದಲ ನಿರ್ದೇಶನದ ನಿರ್ದೇಶಕ ಎನಿಸುವುದಿಲ್ಲ. ಪಳಗಿದ ನಿರ್ದೇಶಕನೊಬ್ಬ ಅತಿಯಾದ ಆತ್ಮ ವಿಶ್ವಾಸದಿಂದ ಚಿತ್ರ ಮಾಡುವಂತೆಯೇ ಗುರುಮೂರ್ತಿ ಸುನಾಮಿ ನಿರ್ದೇಶನ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಖುಷಿಯಾಗಿರುವ ನಿರ್ಮಾಪಕರು ಅವರ ಜೊತೆಯಲ್ಲಿ ಮತ್ತೊಂದು ಚಿತ್ರ ಮಾಡುವ ಆಶಯದಲ್ಲಿ ಓಡಾಡುತ್ತಿದ್ದಾರೆ.

ಚಿತ್ರದಲ್ಲಿ ನೃತ್ಯ ನಿರ್ದೇಶಕ ಧನುಕುಮಾರ್ ಕ್ರಿಯೇಟಿವ್ ಹೆಡ್ ಆಗಿ ದುಡಿದಿರುವುದು ವಿಶೇಷ.

ಇನ್ನೇನು ಹೊಸದಾಗಿ ಇವೆಂಟ್ ಮಾಡುವ ಉತ್ಸಾಹದಲ್ಲಿರುವ ಚಿತ್ರತಂಡ ಚಿತ್ರದ ಬಿಡುಗಡೆಯನ್ನು ರೋಚಕ ಕುತೂಹಲದಿಂದ ಎದುರು ನೋಡುತ್ತಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *