Snehapriya.com

June 9, 2025

ಟ್ವೆಂಟಿ ಒನ್ ಅವರ್ಸ್ ಧನಂಜಯ್ ಮೊದಲ ಕ್ಲಾಸಿಕ್ ಸಿನಿಮಾ..

Social Share :

ಜಾಹಿರಾತುಗಳಲ್ಲಿ ಬರುವ ಕ್ಲಾಸಿಕ್ ಗುಣ ಈ ಚಿತ್ರಕ್ಕಿದೆ. ಇಲ್ಲಿ ಎಲ್ಲವೂ ಹೊಸತು.. ಹಾಗಾಗಿ ಡಾಲಿ ಧನಂಜಯ್ ಕೂಡ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹೆಸರು ‘ಟ್ವೆಂಟಿ ಒನ್ ಅವರ್ಸ್’ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.. ಅರೇ.. ಸದ್ದೇ ಇಲ್ಲದೆ ಯಾವಾಗ ಇದು ರೂಪುಗೊಂಡಿತು ಎಂಬ ಅಚ್ಚರಿಯ ಪ್ರಶ್ನೆಗೆ ಚಿತ್ರದ ನಿರ್ದೇಶಕ ಜೈಶಂಕರ್ ಪಂಡಿತ್ ಉತ್ತರ ನೀಡಿದರು.

ಮೊದಲ ಲಾಕ್ ಡೌನ್ ಮುಗಿದ ಆ ಗ್ಯಾಪ್ ನಲ್ಲಿ ಧನಂಜಯ್ ಅವರಿಗೆ ಕಥೆ ಹೇಳಿದಾಗ, ಅವರಿಂದ ಒಪ್ಪಿಗೆ ದೊರೆಯಿತು. ತಕ್ಷಣವೇ ಸಿನಿಮಾ ತಯಾರಿ ನಡೆಸಿದೆವು. ಇದೊಂದು ತನಿಖಾ ರೂಪದ ಕಥೆ. ಬೆಂಗಳೂರಿನಲ್ಲಿ ಕೊಲೆಯಾಗುವ ಕೇರಳ ಹುಡುಗಿಯ ಕೊಲೆ ಆರೋಪಿಗಳ ಪತ್ತೆಗೆ ಕೇರಳದಲ್ಲಿ ಕಾರ್ಯಾಚರಣೆ ನಡೆಸುವುದು ಕಥೆ. ಧನಂಜಯ್ ಇಲ್ಲಿ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ ಎಂದರು ನಿರ್ದೇಶಕರು.

ಅಂದ ಹಾಗೆ ನಿರ್ದೇಶಕ ಜೈಶಂಕರ್ ಪಂಡಿತ್ ಭಾರತೀಯ ಮಟ್ಟದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಜಾಹಿರಾತು ನಿರ್ದೇಶನ ಮಾಡಿದ ಅನುಭವ ಉಳ್ಳವರು. ಹಾಗಾಗಿ ಈ ಚಿತ್ರವೂ ಕ್ಲಾಸಿಕ್ ರೂಪ ಪಡೆದಿದೆ‌ ಎಂಬ ಉತ್ತರಗಳೂ ಬಂದವು.

ಮುಖ್ಯ ಪಾತ್ರದಲ್ಲಿ ಧನಂಜಯ್ ಅವರಿದ್ದರೆ, ಕೇರಳ ಮೂಲದ ಸುದೇವ್ ನಾಯರ್, ರಾಹುಲ್ ನಾಯರ್ ಹಾಗೂ ಇತರ ಕಲಾವಿದರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಭಾಷೆಯ ಈ ಚಿತ್ರ ಕೇರಳ ಕನ್ನಡದಲ್ಲಿಯೂ ಇರುತ್ತದೆ ಎಂಬ ಮಾಹಿತಿಗಳು ಬಂದವು.

ಜೈಶಂಕರ್ ಪಂಡಿತ್ ಅವರಿಗೆ ಇದು ಮೊದಲ ಸಿನಿಮಾ. ಇಬ್ಬರ ಜೀವನದಲ್ಲಿ ಏನಾಗುತ್ತದೆ ಎಂಬುದು ಕಥೆ. ಸಂಜೆ ಆರರಿಂದ ನಡೆಯುವ ಇಪ್ಪತ್ತೊಂದು ಗಂಟೆಗಳಲ್ಲಿ ಏನಾಗುತ್ತದೆ ಎಂಬುದು ಕುತೂಹಲ. ನಾನು ಧನಂಜಯ್ ಅವರ ‘ಟಗರು’ ಮಾತ್ರ ನೋಡಿದ್ದೆ. ಅಚ್ಚರಿ ಆಯ್ತು ಅವರು ಅಷ್ಟು ಸರಳ. ನಿರ್ದೇಶಕರ ನಟ ಎಂದು ಧನಂಜಯ್ ಅವರಿಗೆ ಹೊಗಳಿಕೆ ಕೂಡ ಬಂತು ನಿರ್ದೇಶಕರಿಂದ.

ನಾನು ಉಡುಪಿಯವನು ಆದರೂ ಕನ್ನಡ ಸ್ವಲ್ಪ ಕಷ್ಟ ಎಂದರು ರಾಹುಲ್. ನನ್ನದು ಒಬ್ಬ ಶಂಕಿತನ ಪಾತ್ರ ಎಂಬ ಉತ್ತರ ಕೊಟ್ಟರು ಸುದೇವ್ ನಾಯರ್.

ಚಿತ್ರತಂಡದ ಬಾಲು, ಅಭಿ, ಸುನಿಲ್, ಶಂಕರ್, ಅಭಿಷೇಕ್ ಮಾತನಾಡಿದರು. ಧನಂಜಯ್ ಅವರ ಸೇರ್ಪಡೆ ಬಳಿಕ ಈ ಚಿತ್ರ ಬೇರೆಯದೇ ರೂಪ ಪಡೆದು ಕೊಂಡಿತು ಎಂಬ ವಿವರ ಕೊಟ್ಟರು.

ಇದೇ 20ರಂದು ಚಿತ್ರವು ತೆರೆಗೆ ಬರಲು ಸಿದ್ದತೆ ನಡೆಸಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *