ನೈಜ ಕಥೆ ಆಧರಿಸಿ ಮಾಡಲಾಗಿದ್ದ ‘ದಂಡುಪಾಳ್ಯ’ ಚಿತ್ರ ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಆ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಕಥೆಯ ಮುಂದುವರಿದ ಭಾಗವನ್ನು ಪ್ರಸ್ತುತಪಡಿಸಲು ಕಾಯುತ್ತಿದ್ದಾರೆ..
ಅದೇ ಹುಬ್ಬಳ್ಳಿ ಡಾಬ..!
ತ್ರಿಕೋನ ಧಾಟಿಯ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಶೃಂಗಾರ ರಸವನ್ನು ಯೆಥೇಚ್ಚವಾಗಿ ಉಣಬಡಿಸಲಾಗಿದೆ..
ತೆಲುಗು ಮೂಲ ಕಥಾವಸ್ತು ಜೊತೆಗೆ ಕನ್ನಡಕ್ಕೆ ಹೊಂದಿಸಲಾಗಿದೆ. ಇದೇ ವಾರ ಅಂದರೆ ನವೆಂಬರ್ 11ರಂದು ತೆರೆ ಕಾಣುತ್ತಿರುವ ಈ ಚಿತ್ರ ಭರಪೂರ ಮನರಂಜನೆ ಹೊಂದಿದೆ ಎಂಬುದು ನಿರ್ದೇಶಕ ಶ್ರೀನಿವಾಸರಾಜು ಅವರ ಸಮರ್ಥನೆ.
ಈಚೆಗೆ ಮೂರು ಹಾಡು ಹಾಗೂ ಟ್ರೈಲರ್ ಬಿಡುಗಡೆಗೊಳಿಸಿ ಮಾತುಕತೆಗೆ ಕುಳಿತ ಶ್ರೀನಿವಾಸರಾಜು ಚಿತ್ರದ ಆಶಯಗಳನ್ನು ವಿವರಿಸುತ್ತಾ ಹೋದರು. ಪ್ರೇಮ, ಕಾಮದ ನಡುವೆ ಮತ್ತೇನೋ ಸುಳಿಯುತ್ತದೆ ಅದೇ ಕುತೂಹಲದ ವಿಷಯ ಎಂದರು.
ತೆಲುಗಿನ ನವೀನ್ ಚಂದ್ರ ಈ ಚಿತ್ರದ ಮುಖ್ಯ ಪಾತ್ರಧಾರಿ. ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ ಜೊತೆಗಿದ್ದಾರೆ. ರವಿಶಂಕರ್, ರಾಜಾ ರವೀಂದ್ರ, ನಾಗಾ ಬಾಬು, ಅಯ್ಯಪ್ಪ ಶರ್ಮ, ಪೂಜಾ ಗಾಂಧಿ, ರವಿಕಾಳೆ, ಮಕರಂದ ದೇಶಪಾಂಡೆ ತಾರಾಗಣದಲ್ಲಿ ಇದ್ದಾರೆ. ಚರಣ್ ಅರ್ಜುನ್ ಸಂಗೀತ, ವೆಂಕಟ್ ಪ್ರಸಾದ್ ಛಾಯಾಗ್ರಹಣವಿದೆ ಎಂಬ ವಿವರಗಳನ್ನು ನೀಡಿದರು.
ನಂತರ ನಟ ರವಿಶಂಕರ್ ನಿರ್ದೇಶಕರ ಜೊತೆಯಾದರು. ಏಕೆಂದರೆ ಶ್ರೀನಿವಾಸರಾಜು ಅವರ ‘ಕೋಟೆ’ ಚಿತ್ರವೇ ರವಿಶಂಕರ್ ಅವರ ಮೊದಲ ಚಿತ್ರ. ಅಲ್ಲಿಂದ ಇಲ್ಲಿಯವರೆಗೆ ಒಳ್ಳೆಯ ಪಾತ್ರಗಳನ್ನೇ ನನಗೆ ನೀಡುತ್ತಾ ಬಂದಿದ್ದಾರೆ. ಇದರಲ್ಲಿಯೂ ಇನ್ಸ್ ಪೆಕ್ಟರ್ ಪಾತ್ರ. ಅದು ನಿಜ ಜೀವನದ ಪಾತ್ರ ಎಂಬ ವಿವರ ಕೊಟ್ಟರು ರವಿಶಂಕರ್.
ತಮಿಳಿನಲ್ಲಿ ಜನಪ್ರಿಯವಾಗಿರುವ ಗೀತೆಯೊಂದರ ಟ್ಯೂನ್ ಈ ಚಿತ್ರಕ್ಕೆ ಬಳಸಲಾಗಿದೆ. ಆನಂತರ ಅದು ನನ್ನ ಅಚ್ಚು ಮೆಚ್ಚಿನ ಗೀತೆ ಎಂಬುದು ತಿಳಿಯಿತು. ನಿಜಕ್ಕೂ ನಾನು ಥ್ರಿಲ್ಲದೆ ಎಂದು ಹೇಳುತ್ತಾ ಹೋದರು ರವಿಶಂಕರ್.