ಕನ್ನಡದಲ್ಲಿ ಹೊಸ ಯುಗ ಆರಂಭವಾಗಿದೆ. ತಮಿಳು ಚಿತ್ರರಂಗದಲ್ಲಿ ಆಗಿರುವ ಬದಲಾವಣೆ ಪರ್ವ ಇಲ್ಲಿ ಪ್ರಯೋಗ ಮಾಡಲು ಅನೇಕ ಪ್ರತಿಭಾವಂತ ಯುವಕರು ಪ್ರಯತ್ನ ನಡೆಸಿದ್ದಾರೆ. ಅವರಲ್ಲಿ ತಾಯ್ ಲೋಕೇಶ್ ನಡೆಸಿರುವ ನವ ನವೀನ ಪ್ರಯತ್ನಕ್ಕೆ ಸಿನಿಮಾ ಜಗತ್ತು ತಿರುಗಿ ನೋಡಿದೆ. ಏಕೆಂದರೆ ಇದು ಹಿಂಸೆಯ ಹೊಸ ವ್ಯಾಖ್ಯಾನ ಎಂದು ಕರೆದುಕೊಳ್ಳುತ್ತಿದೆ. ಅಂದ ಹಾಗೆ ಚಿತ್ರದ ಹೆಸರು ‘ಕಲರ್ ಆಫ್ ಟ್ಯೋಮ್ಯಾಟೋ’. ಇದೂ ರಕ್ತವನ್ನೇ ಸಾಂಕೇತಿಸುತ್ತದೆ. ಈಚೆಗೆ ಬಿಡುಗಡೆಗೊಂಡ ಚಿತ್ರದ ಟೀಸರ್ ನಲ್ಲಿ ರಕ್ತದ ಚಹರೆ ಮತ್ತು ಉಪಸ್ಥಿತಿ ಕ್ಲಾಸಿಕ್ ಅನುಭವಗಳನ್ನೇ ನೀಡಿತು.
ಹಿರಿಯ ಬರಹಗಾರ ಕೋಟಗಾನಹಳ್ಳಿ ರಾಮಯ್ಯ ಅವರ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರದಲ್ಲಿ ‘ಬೆಂಕಿ ಪೊಟ್ಟಣ’ ಖ್ಯಾತಿಯ ಪ್ರತಾಪ್ ನಾರಾಯಣ್ ನಾಯಕ ನಟ. ಮೂರು ಬೇರೆ ಬೇರೆ ಕಥೆಗಳು ಇಲ್ಲಿ ಬೆಸೆದುಕೊಂಡಿವೆ. ಹಾಗಾಗಿ ತಕ್ಷಣಕ್ಕೆ ಕಥೆಯ ಆಯಾಮಗಳನ್ನು ಹುಡುಕುವುದು ಕಷ್ಟವಾಗುತ್ತದೆ ಎಂದರು ನಿರ್ದೇಶಕ ತಾಯ್ ಲೋಕೇಶ್. ನೆರೆಯ ತಮಿಳಿನಲ್ಲಿ ಪಾ ರಂಜಿತ್, ವೆಟ್ರಿ ಮಾರನ್, ಸುಗುಮಾರನ್ ಥರದವರು ಕಂಟೆಂಟ್ ಸಿನಿಮಾ ಯಶಸ್ವಿಗೊಳಿಸಿದಂತೆಯೇ. ಈ ಮಣ್ಣಿನ ಸೊಗಡನ್ನು ಅಭಿವ್ಯಕ್ತಿಸುವುದು ನಮ್ಮ ಆಶಯ ಎಂದರು ತಾಯ್ ಲೋಕೇಶ್.
ಈ ಚಿತ್ರ ಒಂದು ಕಮರ್ಷಿಯಲ್ ಥಾಟ್ ಅಷ್ಟೇ.. ಅದಕ್ಕೆ ಬೇರೆ ಅರ್ಥ ಕಲ್ಪಿಸಲು ಸಾಧ್ಯವಾಗದು ಎಂದರು. ಕೋಲಾರ ಭಾಗದ ರೈತನ ಸಂಕಷ್ಟವನ್ನು ಈ ಕಥೆಯು ಹೇಳುತ್ತದೆ ಎಂದರು ಕಥೆಗಾರ ಕೋಟಗಾನಹಳ್ಳಿ ರಾಮಯ್ಯ. ಇಲ್ಲಿ ಹಿಂಸೆಯ ಹೊಸ ವ್ಯಾಖ್ಯಾನ ಆರಂಭವಾಗಿದೆ. ಕಲಾತ್ಮಕ ಬೇಡ ಆ ರೀತಿಯ ಚಿತ್ರ ಮಾಡೋಣ ಸಿನಿಮಾ ಅಲ್ಲ ಇದೊಂದು ಕಲಿಕೆ
‘ದಿ ಕಲರ್ ಆಫ್ ಟೊಮ್ಯಾಟೊ’ ಎಂದರು ರಾಮಯ್ಯ.
ಸ್ವಾತಿ ಕುಮಾರ್ ಈ ಚಿತ್ರದ ನಿರ್ಮಾಪಕರು. ಎಸ್.ನಾರಾಯಣ್ ಅವರ. 5D ಚಿತ್ರವನ್ನೂ ಇವರೇ ನಿರ್ಮಿಸುತ್ತಿದ್ದಾರೆ. ಸದಾ ಕಾಲವೂ ಸಿನಿಮಾ ನೋಡುವ ನನಗೆ ಕನ್ನಡಕ್ಕೆ ಹೊಸತನದ ಚಿತ್ರಗಳನ್ನು ಕೊಡುವ ಆಶಯ ನಮ್ಮದು ಎಂದರು ನಿರ್ಮಾಪಕ ಕುಮಾರ್. ಈ ಟೀಸರ್ ನ ರೀತಿಯಲ್ಲೇ ಸಿನಿಮಾ ಇರುತ್ತದೆ ಎಂಬ ಭರವಸೆಯನ್ನೂ ಕೊಟ್ಟರು.
ಎಲ್ಲರೂ ಬೆಂಕಿಪಟ್ಟಣ ಆದ ಮೇಲೆ ಕಳೆದೋದ ಅಂತ್ತಿದ್ದರು. ಅಲ್ಲಿ ಮಿಸ್ ಆಗಿದ್ದು ಇಲ್ಲಿ ನೋಡಬಹುದು. ಒಂದು ಒಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದರು ಪ್ರತಾಪ್ ನಾರಾಯಣ್.
ಅರ್ಜುನ್ ರಾಮ್ ಸಂಗೀತ ನಿರ್ದೇಶಕ. ಟೀಸರ್ ಸಂಗೀತ ವಿಶೇಷವಾಗಿದ್ದು, ಸಾಂಗ್ಸ್ ಕೆಲಸ ನಡೀತಾ ಇದೆ. ಮತ್ತು ಇದು ಕಮರ್ಷಿಯಲ್ ಇರುತ್ತೆ. ಪ್ಯಾರಲಲ್ ಸೌಂಡ್ ವರ್ಕ್ ಮಾಡುವ ಅವಕಾಶವೂ ಇದೆ ಎಂದರು.
ಛಾಯಾಗ್ರಾಹಕ ಪ್ರಶಾಂತ್ ಸಾಗರ್ ಸಂಕಲನಕಾರ ವಲಿ ಕುಲಾಯ್ಸ್ , ರಂಗತಂಡದ ರಾಮಕೃಷ್ಣ ಬೆಳತ್ತೂರು ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತುಂಬಾ ಧನ್ಯವಾದಗಳು ಸರ್ .. ಹೊಸ ಹುಡುಗರ ಕಾರ್ಯಕ್ರಮಕ್ಕೆ ಬಂದು ಹಾರೈಸಿ .. ಈ ಅಪರೂಪದ ಪ್ರೋತ್ಸಾಹದ ಬರಹವನ್ನು ಕೊಟ್ಟು ಬೆಂಬಲಿಸಿದ್ದಕ್ಕೆ .. ನಾನು ಹಾಗೂ ನಮ್ಮ “ದಿ ಕಲರ್ ಆಫ್ ಟೊಮೆಟೊ” ಚಿತ್ರತಂಡ ಎಂದೆಂದಿಗೂ ಆಭಾರಿ 🙏