ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ ಸಿನಿಮಾ ನೋಡುತ್ತಲೇ ಭಾವುಕರಾದರು..
ಅವರು ಅಧಿಕಾರ ವಹಿಸಿಕೊಂಡ ಆಸು ಪಾಸುನಲ್ಲೇ ಬಿಟ್ಟು ಹೋದ ಪ್ರೀತಿಯ ನಾಯಿ ‘ಸನ್ನಿ’ ಅವರನ್ನು ಹೆಚ್ಚು ಕಾಡಿರಬೇಕು..
ಮನುಷ್ಯನ ಯಾತನಾಮಯ ಕ್ಷಣಗಳು ಅನೇಕರಿಗೆ ಅರ್ಥವಾಗದೇ ಹೋಗಬಹುದು.. ಆದರೆ ಪ್ರಾಣಿಗಳು ಅನುಭವಿಸುವ ನೋವು ಅದನ್ನು ಸಾಕಿ ಸಲುಹಿದವರನ್ನು ಕಾಡುತ್ತವೆ..
ಇದೇ ನೆಲೆಯಲ್ಲಿ ಇರುವ ಕಥೆ ‘ಚಾರ್ಲಿ’ಯದು.. ಈ ಸಾಕು ನಾಯಿ ಈಗ ಎಲ್ಲಾ ತನ್ನ ಸಮುದಾಯದ ಪ್ರತಿನಿಧಿ. ಹಾಗಾಗಿ ನಾಯಿ ಸಾಕಿದವರಿಗೆ ಅದರ ಸಂಕಷ್ಟ ನೋವು ಅರಿವಾಗುತ್ತದೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅತ್ಯಂತ ಸಹೃದಯರು.. ಸಿನಿಮಾ ಮಂದಿಗೆ ಅವರೆಂದರೆ ಪಂಚಪ್ರಾಣ.. ಸಿನಿಮಾದ ಬಗ್ಗೆ ಬೊಮ್ಮಾಯಿ ಅವರ ಪ್ರೀತಿ ಏನೆಂಬುದು ಅರಿವಾದ ಕ್ಷಣ ಅದು..
ಚಿತ್ರ ನೋಡುತ್ತಲೇ ಅಳುತ್ತಾ ತಮ್ಮ ಸಾಕುಪ್ರಾಣಿಯನ್ನು ನೆನಪಿಸಿ ಕೊಂಡರು.. ಅದೇ ಗುಂಗಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು..
ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಸ್ವಾರ್ಥವಿರದ ಪ್ರೀತಿಗೆ ಉತ್ತಮ ಉದಾಹರಣೆ. ಅತ್ಯಂತ ಪರಿಶುದ್ಧ ಪ್ರೀತಿ ಅದು ಎಂದು ಗದ್ಗದಿತರಾಗಿ ನುಡಿದರು.
ನಾಯಿಯ ಜೊತೆ ರಕ್ಷಿತ ಶೆಟ್ಟಿ ಅಭಿನಯ ಮನೋಜ್ಞವಾಗಿದೆ.. ಏಕೆಂದರೆ ಪ್ರಾಣಿಗಳನ್ನು ಅರ್ಥ ಮಾಡಿಕೊಂಡು ನಟಿಸುವುದು ಸುಲಭದ ಮಾತಲ್ಲ..
ಮನುಷ್ಯನನ್ನು ಅತ್ಯಂತ ಪ್ರೀತಿಸುವ ಪ್ರಾಣಿ ನಾಯಿ. ಮನುಷ್ಯನೂ ನಾಯಿಯನ್ನು ಪ್ರೀತಿಸುತ್ತಾನೆ. ಹಾಗಾಗಿ ತಾವು ಕೂಡ ಮನೆಯಲ್ಲಿ ಹೆಣ್ಣು ನಾಯಿ ‘ಟಿಯಾ’ಳನ್ನು ಸಾಕುತ್ತಿರುವುದಾಗಿ ತಿಳಿಸಿದರು.
ಪ್ರತಿಯೊಬ್ಬರಲ್ಲೂ ಪ್ರಾಣಿ ಪ್ರಿಯ ಗುಣಗಳಿರುತ್ತವೆ.. ಬೀದಿನಾಯಿಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಅವುಗಳನ್ನು ಉತ್ತಮ ರೀತಿಯಲ್ಲಿ ಸಾಕಿ ಸಲುವುವ ಪ್ರಯತ್ನವಾಗಿ ತಜ್ಞರೊಂದಿಗೆ ಚರ್ಚಿಸಲಾಗುವುದು;
ನಾಯಿಗಳ ತರಬೇತಿ ನೀಡುವವರಿಗೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಬೀದಿನಾಯಿಗಳನ್ನು ದತ್ತು ಪಡೆಯುವ ಪ್ರಕ್ರಿಯೆ ಸಹ ಆರಂಭವಾಗಬೇಕು ಎಂದರು.