ನಟ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ ಎಂಬುದು ನಿಷ್ಠುರ ಸತ್ಯ. ಆದರೆ ಅವರು ತಮ್ಮ ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ. ನಿಜ ಈಚೆಗೆ ಅವರು ಅಭಿನಯಿಸಿದ ‘ರಣಂ’ ಚಿತ್ರದ ಕಾರ್ಯಕ್ರಮದಲ್ಲಿ ಅದು ವ್ಯಕ್ತವಾಯಿತು.
ಮುಖ್ಯವಾಗಿ ಅಲ್ಲಿ ಎರಡು ರೀತಿಯ ನೋವಿತ್ತು.. ಒಂದು ನಾಯಕ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಹೊರಟು ಹೋಗಿದ್ದಾರೆ ಎಂಬುದು.. ಮತ್ತೊಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಚಿತ್ರರಂಗದಲ್ಲಿ ನಿರ್ಮಾಪಕ ಹೇಗೆ ಅಸಹಾಯಕನಾಗಿ ಇರಬಲ್ಲ ಎಂಬುದನ್ನು ವ್ಯಕ್ತಪಡಿಸಿದ್ದು. ಹೌದು ರಣಂ ಚಿತ್ರದ ಬಿಡುಗಡೆ ಪೂರ್ವ ಭಾವಿಯಾಗಿ ಏರ್ಪಡಿಸಿದ್ದ ಅದ್ದೂರಿ ಸಮಾರಂಭ ನೋವಿಗೂ ಸಾಕ್ಷಿಯಾಯಿತು.
ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡ ಅನೇಕ ಮಾಹಿತಿಗಳನ್ನು ನೀಡಿತಾದರೂ ಚಿರು ಸರ್ಜಾ ಕಣ್ಮರೆ ವಿಷಯವೇ ಪ್ರಧಾನವಾಗಿ ನೋವು ಎದ್ದು ಕಂಡಿತು. ಚಿತ್ರದಲ್ಲಿ ಆ ದಿನಗಳು ಚೇತನ್ ಕೂಡ ಮುಖ್ಯ ಪಾತ್ರದಲ್ಲಿದ್ದು, ನಿಜ ಜೀವನದಲ್ಲಿ ಅನೇಕ ಚಳುವಳಿಗಳಲ್ಲಿ ಭಾಗವಹಿಸುವ ಅವರ ಮನಸ್ಥಿತಿಗೆ ಪೂರಕವಾಗಿಯೇ ಚಿತ್ರದಲ್ಲಿ ಅವರ ಪಾತ್ರವಿದೆ ಎಂಬ ಮಾಹಿತಿಗಳು ಬಂದವು. ಇದೇ ವೇಳೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿದ್ದು ವಿಶೇಷವಾಗಿತ್ತು.
ಚಿರು ಬಗ್ಗೆ ಮೇಘನಾ ನಿರ್ಭಾವುಕವಾಗಿ ಮಾತನಾಡಿದ ವಿಡಿಯೋ ಇತ್ತು. ನನ್ನ ಮಗನಲ್ಲಿ ಚಿರುವನ್ನು ಕಾಣುತ್ತಿದ್ದೇನೆ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು. ಮಾರ್ಚ್ 26 ಕ್ಕೆ ಚಿತ್ರವು ಬಿಡುಗಡೆ ಕಾಣುತ್ತದೆ. ಹಲವು ಕಷ್ಟಗಳನ್ನು ಎದುರಿಸಿ ಕೂಡ ಧೈರ್ಯವಾಗಿ ಇರುವೆ ಎಂದು ಹೇಳಿಕೊಂಡರು ನಿರ್ಮಾಪಕ ಕನಕಪುರ ಶ್ರೀನಿವಾಸ್ ವೇದಿಕೆ ಮೇಲೆ ಹಾಡಿ ಕುಣಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಶುಭ ಹಾರೈಸಿದ ವಿಡಿಯೋ ಪ್ರಸಾರವಾಯಿತು. ಚೇತನ್, ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಮಾತನಾಡಿದ್ದು ವಿಶೇಷವಾಗಿತ್ತು.
ಚಿರು ಮಾವ ಹಾಗೂ ಹಿರಿಯ ನಟ ಸುಂದರ್ ರಾಜ್ ನನ್ನ ಅಳಿಯ ಈಗಲೂ ಇದ್ದಾನೆ. ಅದು ಮಗನ ರೂಪದಲ್ಲಿ ಎಂದು ಹೇಳಿದ್ದು ಸಹ ಗಮನ ಸೆಳೆಯಿತು..