ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಅದ್ಭುತ ಸ್ಮಾರಕ ಮಾಡಲಾಗುವುದು..
ಹೀಗೆಂದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು..
ಸಂದರ್ಭ ರಿಂಗ್ ರಸ್ತೆಗೆ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ‘ಬಾನ ದಾರಿಯಲ್ಲಿ ಪುನೀತ್ ಪಯಣ..’ ಉದ್ಘಾಟನಾ ಕಾರ್ಯಕ್ರಮ..
ಪುನೀತ್ ರಾಜ್ಕುಮಾರ್ ಒಬ್ಬ ಕೊಡುಗೈ ದಾನಿಯಾಗಿ ಬದುಕಿದರು. ಅವರ ಜನಪ್ರಿಯತೆಯನ್ನು ನಾನು ರಾಜ್ಯದ ಮೂಲೆ ಮೂಲೆಯಲ್ಲಿಯೂ ಕಂಡಿರುವೆ. ಹಾಗಾಗಿ ಅವರ ಸ್ಮಾರಕ ಅದ್ಭುತವೆನಿಸುವಷ್ಟು ಸೊಗಸಾಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ರಿಂಗ್ ರಸ್ತೆಗೆ ಪುನೀತ್ ಅವರ ಹೆಸರಿಡುವಲ್ಲಿ ಸದಾಶಯ ಮೆರೆದಿದ್ದೇವೆ ಎಂಬ ನಂಬಿಕೆ ನಮ್ಮದು. ಏಕೆಂದರೆ ಅವರೊಬ್ಬ ಅನನ್ಯ ಸಾಧಕ. ಅವರ ಹೆಸರನ್ನು ಅಜರಾಮರ ಆಗಿಸುವಲ್ಲಿ ಚಿಕ್ಕ ಪ್ರಯತ್ನ ಇದು ಎಂದರು.
ಅಂಬರೀಶ್ ಸ್ಮಾರಕ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.
ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಅವರ ಹೆಸರಿಡಲು ತೀರ್ಮಾನಿಸಲಾಗಿದೆ. ಅಂಬರೀಷ್ ನನ್ನ ಆತ್ಮೀಯ ಸ್ನೇಹಿತನಾಗಿದ್ದ. ವಾರದಲ್ಲಿ ಏಳೂ ದಿನ ಜೊತೆಗಿರುತ್ತಿದ್ದೆವು. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು ಬಸವರಾಜ ಬೊಮ್ಮಾಯಿ.