ಚಿತ್ರದ ಹೆಸರು ‘ಚಡ್ಡಿದೋಸ್ತು ಕಡ್ಡಿ ಅಲ್ಲಾಡುಸ್ಬುಟ್ಟ’. ಕೇಳಿದ ತಕ್ಷಣವೇ ಒಂದು ಚಿತ್ರಣ ಕಣ್ಣೆದುರು ಬಂದು ನಿಲ್ಲುತ್ತದೆ.. ಮುಖಾರವಿಂದ ಅಲ್ಲಾಡುತ್ತದೆ.. ಆಗ ಕಿರು ನಗೆ ಮೂಡಿದರೂ ಪೂರ್ಣ ನಗೆಯ ಸವಿ ಅನುಭವಿಸಲು ಚಿತ್ರಮಂದಿರಕ್ಕೆ ಬರಬೇಕು. ಹೌದು ಇದೇ ಸೆಪ್ಟೆಂಬರ್ 17ರಂದು ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ಈ ವಿಷಯ ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಚಿತ್ರತಂಡ ಎದುರಾಗಿತ್ತು. ಚಿತ್ರದ ನಿರ್ದೇಶಕ ಆಸ್ಕರ್ ಕೃಷ್ಣ ಚಿತ್ರದ ತಯಾರಿಕೆ ಹಾಗೂ ಇತರ ಕೆಲಸಗಳ ನಡುವೆ ಎದುರಾದ ಅಡ್ಡಿ ಆತಂತ (ಕೊರೊನಾ) ಹಾಗೂ ಚಿತ್ರದ ಒಳಗಿನ ಆಶಯಗಳನ್ನು ಬಿಚ್ಚಿಟ್ಟರು.
ಲೋಕೇಂದ್ರ ಸೂರ್ಯ ಹೀರೋ. ಕಥೆ ಚಿತ್ರಕಥೆ ಇವರದೇ.. ಚೆನ್ನಾಗಿ ಬರೆದುಕೊಟ್ರು; ಈ ಚಿತ್ರ ಬಿಡುಗಡೆಯ ಬಳಿಕ ಅವರ ಪ್ರತಿಭಾ ಶಕ್ತಿ ಏನೆಂಬುದು ತಿಳಿಯಲಿದೆ. ಇನ್ನು ಏಳು ಅಂಕಿ ಖ್ಯಾತಿಯ ಉದ್ಯಮಿ ಸೆವೆನ್ ರಾಜ್ ನಿರ್ಮಾಪಕರು. ಇವರು ಕಥೆ ಕೇಳಲಿಲ್ಲ; ಪಾತ್ರ ಮಾಡಲು ಒಪ್ಪಿದರು.. ಎಲ್ಲೂ ಸಮಸ್ಯೆ ಬರದಂತೆ ನೋಡಿಕೊಂಡರು. ಲಾಕ್ ಡೌನ್ ಅಡ್ಡಿಯಾಯಿತು. ನಾಯಕ ನಟಿ ಕೇರಳದವರು. ಅತ್ಯುತ್ತಮವಾಗಿ ನಟಿಸಿದ್ದಾರೆ. ಅನಂತ್ ಆರ್ಯನ್ ಸಂಗೀತ ನಿರ್ದೇಶಕ. ಹಾಡುಗಳು ಚಿತ್ರಕ್ಕೆ ಪೂರಕವಾಗಿಯೇ ಇವೆ ಮತ್ತು ಈಗಾಗಲೇ ಸದ್ದು ಮಾಡಿವೆ. ವೈಲೆಂಟ್ ವೇಲು ಸಾಹಸ ನಿರ್ದೇಶನ
ಮಾಡಿದ್ದಾರೆ ಹೀಗೆ ಹೇಳುತ್ತಲೇ ಹೋದರು ಆಸ್ಕರ್ ಕೃಷ್ಣ. ಲೋಕೇಂದ್ರ ಸೂರ್ಯ, ಅನಂತ್ ಸೂರ್ಯನ್, ವೈಲೆಂಟ್ ವೇಲು ಈ ಸಂದರ್ಭದಲ್ಲಿ ಇದ್ದರು.
ನಿರ್ಮಾಪಕರ ಸೆವೆನ್ ಕ್ರೆಜ್
ಚಿತ್ರದ ನಿರ್ಮಾಪಕ ಸೆವೆನ್ ರಾಜ್ ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು ಛಲದಿಂದ ಮೆಲ್ಲೆದ್ದು ನಿಂತು ಬದುಕಿದವರು. 90ರ ದಶಕದಲ್ಲಿ ಖಳ ನಟರಾಗಿ ಹಲವು ಚಿತ್ರಗಳಲ್ಲಿ ನಟಿಸಿದರೂ ಒಂದು ಚಿಕ್ಕ ಘಟನೆಯಿಂದ ಕುಗ್ಗಿ ನಿರ್ಮಾಪಕ ಆಗಲೇ ಬೇಕೆಂದು ಸಾಹಸ ಮಾಡಿದವರು. ಸೆವೆನ್ ರಾಜ್ ಅವರದು ವೈವಿಧ್ಯಮಯ ಬದುಕು. ಬಟ್ಟೆ ತೊಡುವಾಗಲೂ ‘ರೆಡ್ ಅಂಡ್ ವೈಟ್’ ಎಂಬುದಕ್ಕೆ ಬದ್ಧರಾದವರು. ಅವರ ಕಾರು ಕೂಡ ಅದೇ ವೈವಿಧ್ಯಮಯನ್ನು ತೆರೆದುಕೊಡುತ್ತದೆ ಎಂಬುದೇ ಅಚ್ಚರಿ.
ಚಿತ್ರರಂಗದಲ್ಲಿ ತಮ್ಮ ಕ್ರಿಯಾಶೀಲತೆ ಯಿಂದ ಶೋಮ್ಯಾನ್ ಎನಿಸಿಕೊಂಡವರಿದ್ದಾರೆ. ಆದರೆ ನೈಜ ಬದುಕಿನಲ್ಲಿಯೇ ಸೆವೆನ್ ರಾಜ್ ಬಣ್ಣದ ವ್ಯಕ್ತಿ. ಯಾರಿಗೂ ಕೇರ್ ಮಾಡದ ತಮ್ಮ ಆತ್ಮ ತೃಪ್ತಿಗೆ ಹೀಗೆ ಬದುಕುತ್ತಿರುವವರು. ಅವಕಾಶ ಸಿಕ್ಕಿದರೆ ಕನ್ನಡದಲ್ಲಿ ಹೆಚ್ಚು ಚಿತ್ರಗಳನ್ನು ನಿರ್ಮಿಸುವ ಹಂಬಲ ಇವರದು.