ಚಿತ್ರ ನೋಡಿದ ಸೆನ್ಸಾರ್ ಪ್ರಾದೇಶಿಕ ಅಧಿಕಾರಿ ರೋಮಾಂಚನಗೊಂಡರು.. ಜೊತೆಗೆ ಚಿತ್ರವನ್ನು ಎಲ್ಲರೂ ಹೊಗಳಿದರು.. ಇಂತಹ ಪ್ರತಿಕ್ರಿಯೆ ನಿರೀಕ್ಷಿಸದ ತಂಡ ಮಾತ್ರ ಭಾವುಕತೆಯಲ್ಲಿ ಮಿಂದೆದ್ದಿತು. ಮುಖ್ಯವಾಗಿ ನಿರ್ದೇಶಕ ಹರ್ಷ ಹಾಗೂ ನಿರ್ಮಾಪಕ ಜಯಣ್ಣ ಅವರ ಕಣ್ಣುಗಳಿಂದ ನೀರು ಉಕ್ಕಿ ಹರಿಯಿತು..
ಇದಲ್ಲವೆ ಒಂದು ಚಿತ್ರದ ಸಾರ್ಥಕತೆ.. ಹೌದು ಚಿತ್ರತಂಡ ಈಗ ಖುಷಿಯ ಮೂಡ್ ನಲ್ಲಿದೆ. ಅಂದ ಹಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ಭಜರಂಗಿ-2ಗೆ ಈಚೆಗಷ್ಟೇ ಸೆನ್ಸಾರ್ ನಡೆಯಿತು..
ಈ ಸಂದರ್ಭದಲ್ಲಿ ಚಿತ್ರತಂಡ ಅನುಭವಿಸಿದ ಖುಷಿ ಮತ್ತು ರೋಮಾಂಚನವನ್ನು ಅಷ್ಟೇ ಉತ್ಸಾಹದಲ್ಲಿ ವರ್ಣಿಸಿದರು ನಿರ್ದೇಶಕ ಹರ್ಷ.
ಮುಂದಿನ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಜಯಣ್ಣ ಅವರ ಉತ್ಸಾಹ ಕೂಡ ಮೇರೆ ಮೀರಿದೆ. ಏಕೆಂದರೆ ಕಳೆದ ವಾರ ಬಿಡುಗಡೆ ಕಂಡ ಎರಡು ಸ್ಟಾರ್ ಚಿತ್ರಗಳಿಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈಗ ಶಿವಣ್ಣ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮ ಆಚರಿಸಲು ಸಜ್ಜಾಗಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಹ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಇದ್ದಾರೆ. ಅದರ ಭಾಗವಾಗಿ ಅವರು ಪ್ರಚಾರಕ್ಕೆ ಟಿವಿ ವಾಹಿನಿಗಳಿಗೆ ಹೋಗುತ್ತಿದ್ದಾರೆ.
ಇನ್ನು ನಿರ್ದೇಶಕ ಹರ್ಷ ಅವರ ಸಂಭ್ರಮ ಕೂಡ ಹೆಚ್ಚಾಗಿದೆ. ಏಜೆಂದರೆ ಈ ಚಿತ್ರ ಅವರ ಮಾಸ್ಟರ್ ಪೀಸ್. ಕನ್ನಡ ಪ್ರೇಕ್ಷಕರ ಮಟ್ಟಿಗೆ ಇದು ಹೊಸಹಬ್ಬ..