Snehapriya.com

June 8, 2025

ನಿಜ ಜೀವನದ ಸಾಹಸಗಾಥೆ ಹಾರಲಿದೆ ವಿಜಯ ಪತಾಕೆ

Social Share :

ಯಾತ್ರಿಕರ ಸ್ನೇಹಿಯಾಗಿ ಸಂಚಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡಿದ ವಿಜಯ್ ಸಂಕೇಶ್ವರ ಅವರ ಜೀವನಗಾಥೆ ಹೊಂದಿದ ಚಿತ್ರ ಇದೇ ವಾರ ಬಿಡುಗಡೆ ಕಾಣುತ್ತಿದ್ದು, ರಂಜನೆ ಮನರಂಜನೆಯ ಜೊತೆಗೆ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವ ಚಿತ್ರವಾಗಿ ಹೊಮ್ಮುತ್ತಿದೆ..

ಅದೇ ವಿಜಯಾನಂದ..!

ಇದು ಒಂದು ಸಾಹಸಗಾಥೆ..
ಜೀವನ ಪಥದಲ್ಲಿ ಬೆರಗಾಗುವ ಬದಲಾವಣೆ ಕಂಡು ಸಾಧನೆಯ ಶಿಖರಕ್ಕೆ ಏರಿದ ವ್ಯಕ್ತಿಯ ಕಥೆ ಇದು..

ವಿ.ಆರ್.ಎಲ್ ಸಾರಿಗೆ ಮತ್ತು ಅದೇ ಸಂಸ್ಥೆ ಮಾಧ್ಯಮ ಲೋಕದಲ್ಲಿ ಮಾಡಿದ ಸಾಧನೆ ಅದ್ವೀಯ.. ಅದೇ ರೀತಿ ಸಾಮಾನ್ಯ ವ್ಯಕ್ತಿಯೊಬ್ಬರು ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದ ನಿಜ ಜೀವನದ ಸಾಹಸಗಾಥೆ..

ಅವರು ವಿಜಯ ಸಂಕೇಶ್ವರ..!

ಅವರದೇ ಜೀವನದ ಸಾಹಸಮಯ ಘಟನೆಗಳನ್ನು ಆಧರಿಸಿ ಮೂಡಿ ಬಂದಿರುವ ಚಿತ್ರ ಚಿತ್ರರಸಿಕರ ಸ್ಫೂರ್ತಿ ಯ ಸೆಲೆಯಾಗಲಿದೆ.

ಅಸಾಮಾನ್ಯ ವ್ಯಕ್ತಿಯೊಬ್ಬರ ಜೀವನದ ಕಥೆಯನ್ನು ಸಿನಿಮಾವಾಗಿ ನಿರೂಪಿಸುವುದು ಸಾಮಾನ್ಯ ವಿಷಯವಲ್ಲ; ಈ ದಾರಿಯಲ್ಲಿ ನಿರ್ದೇಶಕಿ ರಿಶಿಕಾ ಶರ್ಮಾ ಅದ್ಭುತ ಕ್ರಿಯಾಶೀಲ ನಡೆ ಪ್ರದರ್ಶಿಸಿದ್ದಾರೆ.

ಚಿತ್ರವೂ ಅತ್ಯಂತ ರಂಜನಾತ್ಮಕ ಗುಣಗಳನ್ನು ಪಡೆಯಲು ಮತ್ತು ಪ್ರೇಕ್ಷಕನಿಗೆ ಸ್ಫೂರ್ತಿ ತುಂಬುವ ಹಾಗೂ ಭಾವನಾತ್ಮಕ ಅಂಶಗಳನ್ನು ಒಳಗೊಳಿಸಲು ಹೆಚ್ಚು ಶ್ರಮಿಸಿದ್ದಾರೆ.

ಹಾಗಾಗಿ ಇದು ಮನೆ ಮಂದಿಗೆ ಮನರಂಜನೆ ನೀಡಿ ಮುದಗೊಳಿಸುವ ಚಿತ್ರ. ಸಿನಿಮಾ ಪ್ರೇಮಿಗಳಿಗಂತೂ ಹಬ್ಬ..

ಮುಖ್ಯ ಪಾತ್ರದಲ್ಲಿರುವ ನಿಹಾಲ್, ಸಿರಿ, ಸಂಗೀತ ನಿರ್ದೇಶಕ ಗೋಪಿ ಸುಂದರ್ ಹಾಗೂ ಇತರ ತಾಂತ್ರಿಕ ವರ್ಗ ಅತ್ಯಂತ ಶ್ರಮದ ಜವಾಬ್ದಾರಿಗಳನ್ನು ನಿರ್ವಹಿಸಿರುವುದರಿಂದ ಚಿತ್ರವು ಅತ್ಯುತ್ತಮವಾಗಿ ಮೂಡಿ ಬಂದಿದೆ..

ವಿಜಯಾನಂದ ಸಿನಿಮಾ ಕುರಿತಂತೆ ಈಚೆಗೆ ನಡೆದಿದ್ದ ಆಡಿಯೋ ಬಿಡುಗಡೆಯಲ್ಲಿ ತಮ್ಮ ಜೀವನದ ಯಶೋಗಾಥೆಯನ್ನು ಸ್ವತಃ ವಿಜಯ ಸಂಕೇಶ್ವರ ಅವರೇ ತೆರೆದಿಟ್ಟಿದ್ದರು.

ಒಂದೇ ಒಂದು ಲಾರಿಯಿಂದ ಆರಂಭವಾದ ಯಶಸ್ಸಿನ ಪಯಣ ಮತ್ತು ಉದ್ಯಮ ಬೆಳೆಸಿದ ಪರಿಯನ್ನು ವಿಜಯ ಸಂಕೇಶ್ವರ ವಿವರಿಸಿದ್ದರು.

ಜೊತೆಗೆ ಈ ಸಿನಿಮಾ ವಿಸ್ಮಯ ಪಡುವಷ್ಟು ಉತ್ತಮವಾಗಿ ಮೂಡಿ ಬಂದಿದೆ. ಮಗ ಆನಂದ್ ಎಲ್ಲವನ್ನೂ ನಿರ್ವಹಿಸಿರುವ ರೀತಿ ಅಚ್ಚರಿ. ಹಾಗೆಯೇ ಪತ್ನಿ ಲಲಿತಾ ನನ್ನ ಪರಿಶ್ರಮದ ಹಿಂದಿನ ಪ್ರೇರಕ ಶಕ್ತಿ ಎಂಬುದಾಗಿ ವಿವರಿಸಿದ್ದರು.

ಅಂದ ಹಾಗೆ ವಿಜಯಾನಂದ ಚಿತ್ರದ ಇತರ ಭೂಮಿಕೆಯಲ್ಲಿ ಅನಂತನಾಗ್, ರವಿಚಂದ್ರನ್, ವಿನಯಾಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಶೈನ್ ಶೆಟ್ಟಿ ಹಾಗೂ ದಯಾಳ್ ಪದ್ಮನಾಭನ್ ಇದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *