Snehapriya.com

June 6, 2025

ವೀರಾಂಜನೇಯ ಸಮ್ಮುಖದಲ್ಲಿ ಅರಿಹ ಮುಹೂರ್ತ

Social Share :

ಯುವ ಜನರೇ ಹೆಚ್ಚಾಗಿರುವ ‘ಅರಿಹ’ ಎಂಬ ಚಿತ್ರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಮಂಗಳವಾರ ಮುಹೂರ್ತ ಆಚರಿಸಿಕೊಂಡಿತು..

ಶ್ರೀ ಮಹಾದೇವ್ ಹಾಗೂ ಕಾಜಲು ಕುಂದರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ಸನತ್ ನಟಿಸುತ್ತಿದ್ದಾರೆ.

ನಿರ್ದೇಶಕ ಆದರ್ಶ್ ಈಶ್ವರಪ್ಪ ಚಿತ್ರಕ್ಕೆ ಕ್ಲಾಪ್ ಮಾಡಿದ್ದು, ಹಿರಿಯ ನಟಿ ಭವ್ಯ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಹಿಂದೆ ಹಲವು ಕಿರುಚಿತ್ರ ನಿರ್ದೇಶನ ಮಾಡಿರುವ ಮೋಹನ್ ಕುಮಾರ್ ಹೆಚ್ ‘ಅರಿಹ’ ಚಿತ್ರದ ನಿರ್ದೇಶಕ. ಇದು ಅವರ ಮೊದಲ ಸಿನಿಮಾ. ಎಂಪಿ ಪ್ರೊಡಕ್ಷನ್ ಅಡಿಯಲ್ಲಿ ಸಿ.ಪಿ.ಆರ್.ಗೌಡ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಮುಖ್ಯ ಪಾತ್ರದಲ್ಲಿರುವ ಶ್ರೀ ಈಗಾಗಲೇ ಇರುವುದೆಲ್ಲವ ಬಿಟ್ಟು, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳಲ್ಲಿ ನಟಿಸಿದ್ದು, ಇವರ ಎದುರು ಕಾಜಲ್ ಕುಂದರ್ ನಟಿಸುತ್ತಿದ್ದಾರೆ.

ಕಮರೊಟ್ಟು ಚೆಕ್ ಪೋಸ್ಟ್, ಭೈರವ, ಒಲವೇ ಮಂದಾರ-2, ಚಿ.ತು.ಯುವಕರ ಸಂಘ ಸಿನಿಮಾಗಳ ಮುಖ್ಯ ಪಾತ್ರದಲ್ಲಿ ನಟಿಸಿರುವ ಸನತ್ ಗೆ ಇಲ್ಲಿಯೂ ಮುಖ್ಯ ಪಾತ್ರವಿದೆ.

ಇನ್ನುಳಿದಂತೆ ಅಚ್ಯುತ್ ಕುಮಾರ್, ಶೋಭರಾಜ್, ಶಶಿರಾಜ್, ಆರ್ ಜೆ ವಿಕ್ಕಿ, ಅಶೋಕ್ ಶರ್ಮಾ, ಶ್ವೇತಾ ಆರ್ ಪ್ರಸಾದ್, ಧನುಶ್ರೀ, ವೈನ್ ಸ್ಟೋರ್ ರಘುಗೌಡ, ಅನಘ ಸಾಗರ್, ಹರ್ಷಿತಾ ತಾರಾ ಬಳಗವಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *