Snehapriya.com

June 8, 2025

ಅಪ್ಪು ಗಂಧದಗುಡಿ ವಿಶಿಷ್ಟ ಪೋಸ್ಟರ್..

Social Share :

ಗಂಧದಗುಡಿ ಎಂಬುದರ ಹಿಂದೆ ಒಂದು ಇತಿಹಾಸವಿದೆ. ಅದರಲ್ಲಿ ಕನ್ನಡ ಚಿತ್ರರಂಗದ ಪರಂಪರೆ ಮತ್ತು ಹಿತಾಸಕ್ತಿ ಅಡಗಿದೆ. ಮುಖ್ಯವಾಗಿ ನಾಡಿನ ನೆಲ ಜಲ ಸಂರಕ್ಷಿಸುವ ಮುತುವರ್ಜಿ ಹಾಗೂ ಖಾಳಜಿ ಇದೆ.

ಆದ್ದರಿಂದಲೇ ನಮ್ಮ ಕನ್ನಡ ಚಿತ್ರರಂಗದ ಹೆಸರೂ ಕೂಡ ಗಂಧದಗುಡಿ, ಸ್ಯಾಂಡಲ್ ವುಡ್ ಅಥವಾ ಚಂದನವನ ಆಗಿದೆ. ಇಂತಹ ಗಂಧದಗುಡಿಯ ರಾಜಕುಮಾರನಾಗಿ ಅಭಿಮಾನಿಗಳ ಆರಾಧ್ಯ ದೈವವಾಗಿ ನೆಲೆಸಿದವರು ವರನಟ ಡಾ.ರಾಜ್ ಕುಮಾರ್.

ಅವರ ಆಶೀರ್ವಾದದ ಜೊತೆಗೆ ಬೆಳೆದವರು ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಸದ್ಯ ಅಭಿಮಾನಿಗಳು ದೇವರೆಂದೇ ನೋಡುತ್ತಿದ್ದಾರೆ. ಈ ದೇವರುಗಳ ದರ್ಶನ ಇಲ್ಲಿ ವಿಭಿನ್ನ ಮತ್ತು ವಿಶಿಷ್ಟ. ಅಭಿಮಾನಿಗಳು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇನ್ನೇನು ಅಪ್ಪು ಅವರ ‘ಗಂಧದಗುಡಿ’
ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ‘ಪುನೀತ ಪರ್ವ’ದಲ್ಲಿ ಇಡೀ ದಕ್ಷಿಣ ಭಾರತ ಸಿನಿಮಾ ಸಂಭ್ರಮಿಸುತ್ತಿದೆ. ಮತ್ತೆ ದೇವರು ಅಭಿಮಾನಿಗಳ ಹೃದಯದಲ್ಲಿ ಆಹ್ಲಾದ ತುಂಬುತ್ತಿದ್ದಾರೆ.

ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರಿಯಲ್ ಹೀರೋ ಆಗಿರುವ ‘ಗಂಧದ ಗುಡಿ’ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *