Snehapriya.com

June 8, 2025

ಕಾಗದ ಚಿತ್ರವಿಮರ್ಶೆ

Social Share :

ರೇಟಿಂಗ್ : 5/3

ನಿರ್ಮಾಣ : ಅರುಣ್ ಕುಮಾರ್ ಆಂಜನೇಯ

ನಿರ್ದೇಶನ : ರಂಜಿತ್

ಪ್ರೇಮದ ಘಮಲು ಧರ್ಮದ ಅಮಲು

ಇನ್ನೂ ಹದಿಹರೆಯ..!

ಜಾತಿ ಧರ್ಮವನ್ನು ಮೀರಿ ಪ್ರೇಮ ಬೆಳೆಯುತ್ತದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಹೀಗೆ ಪ್ರೇಮ ಮೊಳೆಯುವುದು ಸಾಮಾನ್ಯ ಅನಿಸಿದರೂ ಹೊರಗಿನ ವಿಷಯದಲ್ಲಿ ಅವರು ಅಮಾಯಕರು.

ಇಲ್ಲಿ ಧರ್ಮದ ವಿಷಯವೇ ಪ್ರಧಾನ. ಅದು ಅಫೀಮು ಇದ್ದಂತೆ ಯಾರನ್ನೂ ಬದುಕಲು ಬಿಡದೆ ಅಮಲಿನಲ್ಲಿಯೇ ಬಲಿ ಪಡೆಯುತ್ತದೆ ಎಂಬುದನ್ನು ಹೇಳಲು ಹೊರಟ ನಿರ್ದೇಶಕರು ಒಂದೇ ಕಡೆ ವಾಲಿರುವುದು ಗೋಚರವಾಗುತ್ತದೆ.

ಶಿವು ಮತ್ತು ಆಯೇಷಾ ಇಬ್ಬರದು ನಿರ್ಮಲ ಪ್ರೀತಿಯೇ ಆದರೂ ಅದು ಪ್ರೀತಿ ಎಂಬ ಅಮಲು. ಪರಸ್ಪರ ಆಕರ್ಷಿಸಲು ಇರುವ ನೆರವು ಅಂದರೆ ಅದು ‘ಕಾಗದ’. ಭಾವನೆಗಳನ್ನು ವ್ಯಕ್ತಪಡಿಸಲು ಅದೊಂದೇ ದಾರಿ.

ಇಲ್ಲಿನ ಮುಗ್ಧ ಪ್ರೇಮಕ್ಕೆ ಅದೇ ಹದಿ ಹರೆಯದ ಗೆಳೆತನ ನೆರವಾಗುತ್ತದೆ. ಆದರೆ ಹದಿ ಹರೆಯದ ಪ್ರೇಮವನ್ನು ಕಾನೂನು ಸಹ ಪುರಸ್ಕರಿಸುವುದಿಲ್ಲ ಎಂಬುದು ವಾಸ್ತವ. ಇದನ್ನು ಮುಗ್ಧತೆಯ ತೂಕಕ್ಕೆ ಹಾಕಿ ನೋಡಬೇಕು ಎಂಬುದೂ ಸಹ ನಿಜವಾದ ಅನಿಸಿಕೆ.

ಧರ್ಮ ಮತ್ತು ಅದರ ಅಮಲು ಮುಗ್ಧ ಪ್ರೇಮವನ್ನು ಸಹಿಸುವುದಿಲ್ಲ ಎಂಬುದೂ ಕಠೋರ ವಾಸ್ತವ. ಇವೆಲ್ಲವನ್ನೂ ಸರಿದೂಗಿಸಿ ತಾರ್ಕಿಕ ಅಂತ್ಯವನ್ನು ಕಾಣಿಸಲು ಯತ್ನಿಸಿರುವುದು ಎದ್ದು ಕಾಣುತ್ತದೆ.

ಊರಿನ ಹಬ್ಬ, ಧಾರ್ಮಿಕ ಒಲವು, ಕಬಡ್ಡಿ ಆಟ ಎಲ್ಲವೂ ಪ್ರೇಕ್ಷಕನನ್ನು ಹಿಡಿದಿಡುತ್ತದೆ ಎಂಬುದು ನಿಜವಾದರೂ ಮೂಲ ಸೆಲೆಯಲ್ಲಿ ಒಂದು ಅಸಮಾಧಾನ ಕಾಡುತ್ತದೆ.

ಆಯೇಷಾ ಪಾತ್ರದಲ್ಲಿ ಅಂಕಿತಾ ಜಯರಾಮ್ ಪರಿಪೂರ್ಣ ನಟನೆಯೊಂದಿಗೆ ಮಿಂಚಿರುವುದು ಚಿತ್ರದ ಹೆಗ್ಗಳಿಕೆ. ಕಣ್ಣಿನಲ್ಲೇ ಮಾತನಾಡುವ ಆಕೆಯ ವರಸೆ ಭವ್ಯ ಭವಿಷ್ಯ ಹೊಂದಿರುವುದರ ಸೂಚಕ.

ಶಿವು ಪಾತ್ರದಲ್ಲಿ ಆದಿತ್ಯ ಮುಗ್ಧತೆಗೆ ತೆರೆದುಕೊಂಡಿರುವುದು ಕಾಣುತ್ತದೆ. ಸಲ್ಮಾ ಪಾತ್ರದಲ್ಲಿ ನೇಹಾ ಪಾಟೀಲ್ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರೆ; ಬಲರಾಜ್ ವಾಡಿ, ಗೌತಮ್ ರಾಜ್, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಹಾಗೂ ಇತರರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಪ್ರದೀಮ್ ವರ್ಮಾ ಹಿನ್ನೆಲೆ ಸಂಗೀತ ಕಿವಿಗಪ್ಪಳಿಸಿ ವಿಜೃಂಭಿಸಿದರೆ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ಕಣ್ಣಿಗೆ ಹಬ್ಬ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *