ಬುದ್ಧಿವಂತ ಉಪೇಂದ್ರ ದೂರದೃಷ್ಟಿ ಇಟ್ಟು ಮಾಡುವ ಚಿತ್ರಗಳು ಎಂದಿಗೂ ದಾಖಲೆ ನಿರ್ಮಿಸುತ್ತವೆ..
ಇದೀಗ ‘ಯು ಐ’ ಚಿತ್ರದ ‘ವಾರ್ನರ್’ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸ್ಟಾರ್ ಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಈಗಾಗಲೇ ಅಮಿರ್ ಖಾನ್, ರಜನಿಕಾಂತ್ ಅವರಿಂದ ಪ್ರಶಂಸೆ ಪಡೆದಿರುವ ಚಿತ್ರದ ಕುರಿತು ಮತ್ತೊಬ್ಬ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ‘ಪುಷ್ಪ-2’ ಖ್ಯಾತಿಯ ಅಲ್ಲು ಅರ್ಜುನ್. ಇಂದು ಅಂದರೆ ಶನಿವಾರ ನಟ, ನಿರ್ದೇಶಕ ಉಪೇಂದ್ರ ಹಾಗೂ ಯುಐ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾಗಿರುವ ಲಹರಿ ವೇಲು ಅವರು ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದರು.
ಹೀಗೊಂದು ಸೌಹಾರ್ದದ ಭೇಟಿ ಎಂದು ಇದು ಬಣ್ಣಿಸಲ್ಪಟ್ಟಿತ್ತಾದರೂ ಅಲ್ಲು ಅರ್ಜುನ್ ಯುಐ ತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು.
ನಾಳಿನ ಜನ ಸಮೂಹ ಮತ್ತು ಸಮಸ್ಯೆಗಳ ಕುರಿತಾಗಿ ಇರುವ ಯುಐ ಚಿತ್ರದ ವಾರ್ನರ್ ಗೆ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ. ಈಚೆಗಷ್ಟೇ ಬಾಲಿವುಡ್ ನ ಪ್ರಖ್ಯಾತ ನಟ ಅಮಿರ್ ಖಾನ್ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
2040ರ ಸಂದರ್ಭದಲ್ಲಿ ಭಾರತದ ಜನರ ವರ್ತನೆ ಮತ್ತು ಸಂದರ್ಭ ಹೇಗಿರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿರುವ ಟ್ರೈಲರ್ ದೇಶದಾದ್ಯಂತ ಈಗ ಸದ್ದು ಮಾಡುತ್ತಿದೆ.