ಅಪಾಯವಿದೆ ಎಚ್ಚರಿಕೆ..!
ಇದು ಚಿತ್ರದ ಹೆಸರು. ಭಯಾನಕ ಎಂಬುದರ ಹಿಂದೆ ಸಾಗುವ ಯುವಕರ ಕಥೆ ಇದು. ಏಕೆ ಏನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.
ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದಲೇ ಪಾಲ್ಗೊಂಡಿತ್ತು. ಹಿರಿಯ ಪತ್ರಕರ್ತೆ ಸರಸ್ಪತಿ ಜಾಗಿರ್ದಾರ್, ಸಿನಿಮಾ ಛಾಯಾಗ್ರಾಹಕ ಮನು ಹಾಗೂ ಇತರರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಕನ್ನಡಪರ ಹೋರಾಟಗಾರರು, ಕ್ಯಾಬ್ ಹಾಗೂ ಆಟೋ ಚಾಲಕರು, ಯುವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗಣ್ಯರು ಟ್ರೇಲರ್ ಬಿಡುಗಡೆಯಲ್ಲಿ ಭಾಗಿಯಾಗಿ ಚಿತ್ರ ಯಶಸ್ಸಿಗೆ ಶುಭ ಕೋರಿದರು.
ಕಿರಿತೆರೆಯಲ್ಲಿ ಹೆಸರು ಮಾಡಿರುವ ವಿಕಾಶ್ ಉತ್ತಯ್ಯ ಚಿತ್ರದ ಮುಖ್ಯ ಪಾತ್ರದಲ್ಲಿರುವ ಚಿತ್ರವನ್ನು ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿದ್ದಾರೆ.
ನೀರು, ಬೆಂಕಿ, ಗಾಳಿ ರೀತಿಯ ಮೂರನ್ನು ಪ್ರತಿನಿಧಿಸುವ ಮೂರು ಪ್ರಮುಖ ಪಾತ್ರಗಳು ಚಿತ್ರದಲ್ಲಿವೆ. ಆ ಪಾತ್ರಗಳನ್ನು ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ನಿರ್ವಹಿಸಿದ್ದಾರೆ ಎಂಬ ಉತ್ತರ ಕೊಟ್ಟರು ನಿರ್ದೇಶಕರು.
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ಹಾರಾರ್ ಕೂಡ ಗಮನ ಸೆಳೆಯುತ್ತದೆ. ಈಗಾಗೇ ಟೀಸರ್ ಗೆ ಅಪಾರ ಬೆಂಬಲ ಸಿಕ್ಕಿದೆ ಎಂದು ಹೇಳಿ ಕೊಂಡರು.
ಚಿತ್ರತಂಡದ ಸದಸ್ಯರಾದ ಅಶ್ವಿನ್ ಹಾಸನ್, ರಾಧಾ ಭಗವತಿ, ಮಿಮಿಕ್ರಿ ಕುಮಾರ್, ಮಿಥುನ್ ತೀರ್ಥಹಳ್ಳಿ, ದೇವ್, ಕಲ್ಪನಾ ಹಾಗೂ ಛಾಯಾಗ್ರಾಹಕ ಕಮ್ ಸಂಗೀತ ನಿರ್ದೇಶಕ ಸುನಾದ್ ಗೌತಮ್, ಗಾಯಕ ರಜತ್ ಹೆಗ್ಡೆ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ವಿವರ ನೀಡಿದರು.
ಚಿತ್ರವು ಇದೇ ಫೆಬ್ರವರಿ 28ರಂದು ಬಿಡುಗಡೆ ಕಾಣುತ್ತಿದ್ದು,ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದವರು ನಿರ್ಮಾಪಕ ಮಂಜುನಾಥ್.ವಿ.ಜಿ ಹಾಗೂ ಪೂರ್ಣಿಮಾ ಗೌಡ.