ನಿರ್ಮಾಪಕ ಎಸ್.ಚಂದ್ರಶೇಖರ್, ಅವರ ಪುತ್ರ ಅಭಯ್ ಗಾಗಿ ನಿರ್ಮಿಸಿರುವ ಎರಡನೇ ಚಿತ್ರ ಹಾಗೂ ಅವರ ಬ್ಯಾನರ್ ನ ಆರನೇ ಚಿತ್ರ ‘ಮಂಡ್ಯ ಹೈದ’ ಪ್ರಚಾರದಲ್ಲಿ ತೀವ್ರತೆಯನ್ನು ಪಡೆದುಕೊಂಡಿದೆ.
ಚಿತ್ರಮಂದಿರಗಳ ಮುಂದೆ ಬ್ಯಾನರ್, ಕಟೌಟ್ ಗಳ ಅಬ್ಬರ ಜೋರಾಗಿದ್ದು, ಚಿತ್ರದ ಬಿಡುಗಡೆಯನ್ನು ಎದುರು ನೋಡಲಾಗುತ್ತಿದೆ.
ಯುವ ಜನರ ಹಾಟ್ ಫೆವರಿಟ್ ಅಭಯ್ ಚಂದ್ರಶೇಖರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಮಂಡ್ಯ ಹೈದ’ ಇದೇ ವಾರ ಅಂದರೆ ಫೆಬ್ರವರಿ 16ರಂದು ಬಿಡುಗಡೆ ಕಾಣುತ್ತಿದೆ.
ಸಂಪೂರ್ಣ ಗ್ರಾಮೀಣ ಭಾಗದ ಚಿತ್ರಣ ಹೊಂದಿರುವ ಚಿತ್ರದಲ್ಲಿ
ಮಂಡ್ಯದ ಹುಡುಗನೊಬ್ಬನ ಪ್ರೇಮ ಮತ್ತು ಅದರ ಸುತ್ತ ನಡೆಯುವ ಘಟನೆಗಳು ಥ್ರಿಲ್ ನ ಅನುಭವ ನೀಡುತ್ತದೆ ಎಂಬುದು ನಿರ್ಮಾಪಕರ ಮಾತು.
ಅಭಯ್ ಚಂದ್ರಶೇಖರ್ ಎದುರು ಭೂಮಿಕಾ ಕಾಣಿಸಿಕೊಂಡಿದ್ದು, ಇತರ ಪಾತ್ರವರ್ಗದಲ್ಲಿ ಬ.ಲ.ರಜವಾಡಿ, ಸುನಂದ ಅವರಲ್ಲದೆ ನಿರ್ಮಾಪಕ ಚಂದ್ರಶೇಖರ್ ಅವರೂ ಕಥೆಗೆ ತಿರುವು ನೀಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ‘ಮನಸಾಗಿದೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಅಭಯ್, ಈಗ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯಹುಡುಗನಾಗಿ ಹೊರ ಹೊಮ್ಮಿದ್ದಾರೆ. ವಿ.ಶ್ರೀಕಾಂತ್ ನಿರ್ದೇಶನದ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಎಲ್ಲಾ ಹಾಡುಗಳು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ನೀಡಿದ್ದು, ಮನುಗೌಡ ಛಾಯಾಗ್ರಹಣವಿದೆ.