ಇದು ಮೂರು ಮತ್ತೊಂದು ತಲೆ ಮಾರಿನ ಕಥೆ ಹೇಳುವ ಸಿನಿಮಾ..
ಒಂದೊಂದು ತಲೆ ಮಾರಿಗೆ ಒಬ್ಬೊಬ್ಬ ಹೀರೋ ಕೊನೆಯದಕ್ಕೆ ಸೂಪರ್ ಹೀರೋ..
ಅದೇ ಮಾನ್ ಸ್ಟಾರ್..!
ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ಈ ಚಿತ್ರವನ್ನು ಉದ್ಯಮಿ ಪುಟ್ಟರಾಜ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.
ಒಂದು ರೀತಿಯಲ್ಲಿ ಇದು ನಿರ್ಮಾಪಕರು ಮಗನಿಗಾಗಿ ಮಾಡಿದ ಸಿನಿಮಾ. 15 ವರ್ಷದ ಮಗ ಬಾಲನಟ ಸಂತೋಷ್ ರೆಡ್ಡಿ ಇಲ್ಲಿ ಸೂಪರ್ ಹೀರೋ..
ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆಯಲ್ಲಿ ಕಿಕ್ಕಿರಿದು ತುಂಬಿದ್ದ ವೇದಿಕೆಯಲ್ಲಿ ಚಿತ್ರತಂಡ ಮಾಹಿತಿಗಳನ್ನು ನೀಡಿತು.
ಮೂರು ತಲೆಮಾರುಗಳ ಪೈಕಿ ಒಂದೊಂದು ತಲೆಮಾರಿನಲ್ಲಿ ಥ್ರಿಲ್ಲರ್ ಮಂಜು, ಧರ್ಮ ಕೀರ್ತಿರಾಜ್ ಹಾಗೂ ಪವನ್ ನಾರಾಯಣ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಕೊನೆಯ ತಲೆಮಾರಿಗೆ ಬಾಲನಟ ಸಂತೋಷ್ ರೆಡ್ಡಿ ಸೂಪರ್ ಹೀರೋ..
ಬಾಲಕ ಸಂತೋಷ್ ರೆಡ್ಡಿ ಹಾಗೂ ಅವರ ತಂದೆ ನಿರ್ಮಾಪಕ ಪುಟ್ಟರಾಜ್ ರೆಡ್ಡಿ ಪರಸ್ಪರ ಭಾವುಕರಾಗಿದ್ದರು. ಚಿಕ್ಕ ವ್ಯಾಪಾರದ ಮೂಲಕ ಬೆಳೆದು ಈ ಮಟ್ಟಕ್ಕೆ ಬಂದಿರುವೆ ಎಂದು ತಂದೆ ಹೇಳಿದರೆ, ಇಂತಹ ಅಪ್ಪ ಸಿಕ್ಕಿರುವುದು ನನ್ನ ಪುಣ್ಯ ಎಂದು ಸಂತೋಷ್ ಭಾವುಕನಾಗಿದ್ದು ಹೃದಯಸ್ಪರ್ಶಿ ಯಾಗಿತ್ತು.
ಇಲ್ಲಿಯವರೆಗೂ 57 ಚಿತ್ರಗಳಿಗೆ ಸಂಗೀತ ನೀಡಿದ್ದು, ಇದು ನಿರ್ದೇಶನದ ಆರನೇ ಚಿತ್ರವಾಗಿದೆ ಎಂಬ ವಿವರಣೆ ನೀಡಿದರು ಆರೋನ್ ಕಾರ್ತಿಕ್ ವೆಂಕಟೇಶ್. ಈ ಚಿತ್ರದ ಸಲುವಾಗಿ ವಿಶೇಷ ಟ್ಯೂನ್ ಗಳನ್ನು ಸಂಯೋಜನೆ ಮಾಡಿರುವುದರ ಜೊತೆಗೆ ಸಾಹಿತ್ಯವನ್ನೂ ಬರೆದಿರುವುದಾಗಿ ಹೇಳಿಕೊಂಡರು.
ಇನ್ನು ಸ್ವಲ್ಪ ಮಾತ್ರ ಚಿತ್ರದ ಕೆಲಸ ಬಾಕಿ ಇದೆ. ಜುಲೈನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಆಶಯವಿದೆ ಎಂಬ ವಿವರ ಬಂತು ಅವರಿಂದ.
ಥ್ರಿಲ್ಲರ್ ಮಂಜು, ಸಂಗೀತಾ ಅನಿಲ್, ಧರ್ಮ ಕೀರ್ತಿರಾಜ್, ಗಣೇಶ್ ರಾವ್ ರಾಜ್ ಬಹದ್ದೂರ್, ವಿಕ್ಟರಿ ವಾಸು, ಸಂದೀಪ್ ಮಲಾನಿ, ದುಬೈ ರಫಿಕ್, ನವಾಜ್, ರಿತ್ವಿಕಾ ತಮ್ಮ ಪಾತ್ರಗಳ ಬಗ್ಗೆ ವಿವರಣೆ ನೀಡಿದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸಂಘದ ಕಟ್ಟದ ಉದ್ಘಾಟನೆ ಬಗ್ಗೆ ಮಾಹಿತಿ ನೀಡುತ್ತಲೇ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಿರಿ ಮ್ಯೂಸಿಕ್ ಚಿಕ್ಕಣ್ಣ, ಪ್ರಚಾರ ಕರ್ತ ಸುಧೀಂದ್ರ ವೆಂಕಟೇಶ್ ಉಪಸ್ಥಿತರಿದ್ದರು.