Snehapriya.com

June 9, 2025

ರಾನಿ ಬಿಡುಗಡೆಯ ಹೊಸ್ತಿಲಲ್ಲಿ ಕಿರಣ್ ರಾಜ್ ಕಾರು ಅಪಘಾತ

Social Share :


ರಾನಿ ಚಿತ್ರ ಬಿಡುಗಡೆಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಆ ಚಿತ್ರದ ನಾಯಕ ನಟ ಕಿರಣ್ ರಾಜ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಕಳೆದ ರಾತ್ರಿ ಚಿತ್ರದ ಕಾರ್ಯ ನಿರ್ವಾಹಕ ನಿರ್ಮಾಪಕ ಗಿರೀಶ್ ಹೆಗಡೆ ಅವರ ಜೊತೆ ಮುದ್ದಿಯ್ಯನ ಪಾಳ್ಯದಿಂದ ಬರುವಾಗ ಈ ಕೆಂಗೇರಿಗೆ ಸಮೀಪ ಈ ಅಪಘಾತ ನಡೆದಿದೆ.

ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆಯ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರು ಚೇತರಿಕೆ ಕಂಡಿದ್ದಾರೆ. ಅವರ ಜೊತೆ ಇದ್ದ ಗಿರೀಶ್ ಆರೋಗ್ಯವಾಗಿದ್ದಾರೆ.

ರಾನಿ ಚಿತ್ರವು ನಾಳೆ ಅಂದರೆ ಸೆಪ್ಟೆಂಬರ್ 12ರಂದು ಬಿಡುಗಡೆ ಕಾಣುತ್ತಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಭೂಗತ‌ಲೋಕದ ಡಾನ್ ಪಾತ್ರದಲ್ಲಿ ಕಿರಣ್ ರಾಜ್ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ ಪೂಜಾರಿ ಉಮೇಶ್ ಹೆಗ್ಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *