Snehapriya.com

June 6, 2025

ಹೊಸ ಸಂಜು ವೆಡ್ಸ್ ಗೀತಾ -2 ಭಾವನಾತ್ಮಕ ಪಯಣ ಸೇರ್ಪಡೆ

Social Share :

* ಜೂನ್ 6ರಂದು ರಾಜ್ಯಾದ್ಯಂತ ಬಿಡುಗಡೆ *

* ಚಿತ್ರಕ್ಕೆ ಶಿವಣ್ಣ, ಎಸ್.ಮಹೇಂದರ್ ಬೆಂಬಲ *

‘ಎದೆಗಾರಿಕೆ ಇರುವ ನಿರ್ಮಾಪಕರು ಚಿತ್ರಕ್ಕೆ ಖರ್ಚು ಮಾಡುವುದರಲ್ಲಿ ಧಾರಾಳತನ ತೋರುತ್ತಾರೆ. ಅಂತಹ ಚಿತ್ರಗಳು ಖಂಡಿತವಾಗಿ ಗೆಲ್ಲಲೇ ಬೇಕಾಗಿದೆ..’

ಹೀಗೆಂದವರು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್. ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಮರು ಬಿಡುಗಡೆಗಾಗಿನ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡು ಇಡೀ ಚಿತ್ರತಂಡವನ್ನು ಹಾಡಿ ಹೊಗಳಿದರು.

ಇಲ್ಲಿ ಕಲಾವಿದರು, ತಂತ್ರಜ್ಞರು ಎಲ್ಲರೂ ಪ್ರತಿಭಾವಂತರು. ಜೊತೆಗೆ ಪ್ರತಿ ದೃಶ್ಯವೂ ಅದ್ಭುತ ನೆಲೆಯಲ್ಲಿ ಕೂಡಿರುವಂತೆ ವಿದೇಶದಲ್ಲಿ ಚಿತ್ರೀಕರಣ ಮಾಡಿರುವುದು ಕನ್ನಡದ ಮಟ್ಟಿಗೆ ಹೆಮ್ಮೆಯ ಸಂಗತಿ ಎಂದರು ಶಿವಣ್ಣ.

ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಮುಖ್ಯ ಭೂಮಿಕೆಯಲ್ಲಿರುವ ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಹೊಸ ಅವತರಣಿಕೆಯಲ್ಲಿ ಬಹಳ ವಿಶೇಷಗಳಿವೆ ಎಂಬುದು ಚಿತ್ರತಂಡದ ವಿವರ.

ನಿರ್ದೇಶಕ ನಾಗ್ ಶೇಖರ್ ನನ್ನ ಶಿಷ್ಯ ಅವರು ಯಾವಾಗಲೂ ಒಳ್ಳೆಯ ಸಿನಿಮಾಗಳನ್ನೇ ಮಾಡ್ತಾರೆ ಎಂದರು ಹಿರಿಯ ನಿರ್ದೇಶಕ ಎಸ್.ಮಹೇಂದರ್. ಕವಿರಾಜ್, ಸತ್ಯ ಹೆಗಡೆಯಂಥ ತಂತ್ರಜ್ಞರು ಜತೆಗಿದ್ದಾಗ ಆ ಚಿತ್ರಕ್ಕೆ ಇನ್ನೂ ಹೆಚ್ಚಿನ ಮೌಲ್ಯ ಬರುತ್ತದೆ. ನಿರ್ಮಾಪಕರು ಒಂದೊಂದು ಫ್ರೇಮ್ ಗೂ ಕೊಟ್ಯಾಂತರ ಹಣ ಖರ್ಚು ಮಾಡಿದ್ದಾರೆ. ನಾನು ಸ್ನೇಹಲೋಕ ಮಾಡಿದಾಗಲೂ ಇದೇ ಅನುಭವ ಆಗಿತ್ತು ಎಂದರು.

ಟೈಟಲ್ ಮೂಲಕವೇ ಚಿತ್ರದ ಬಗ್ಗೆ ಅಗಾಧ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ನಾಗಶೇಖರ್ ನಿರ್ದೇಶನದ ಈ ಚಿತ್ರ ಜೂನ್ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆ ಕಾಣುತ್ತಿದೆ‌.

ಮರು ಬಿಡುಗಡೆ ಕಾಣುತ್ತಿರುವ ಚಿತ್ರಕ್ಕೀಗ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಜೋಡಿಸಲಾಗಿದ್ದು, ಪ್ರೇಕ್ಷಕ ಭಾವ ಸ್ಪರ್ಶ ಪಡೆಯುವುದರಲ್ಲಿ ಅನುಮಾನವಿಲ್ಲ ಎಂಬುದು ನಿರ್ದೇಶಕ ನಾಗ್ ಶೇಖರ್ ನಂಬಿಕೆ.

ನಿರ್ಮಾಪಕ ಛಲವಾದಿ ಕುಮಾರ್, ನಟ ಶ್ರೀನಗರ ಕಿಟ್ಟಿ, ಕವಿರಾಜ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಹಲವಾರು ಪ್ರಮುಖರು ಪ್ರಚಾರ ಸಭೆಯಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *