* ಜನವರಿ 24 ಚಿತ್ರ ಬಿಡುಗಡೆ *
* ಎನ್.ಎಂ.ಕಾತರಾಜ್ ನಿರ್ಮಾಣ *
* ಆನೆ ಸಾಹಸದ ಆಕರ್ಷಣೆ *
ಉದ್ಯಮಿ ಎನ್.ಎಂ.ಕಾತರಾಜ್ ನಿರ್ಮಾಣದ ಅಡ್ವೆಂಚರ್ ಕಾಮಿಡಿ ಜಾನರ್ ನ ಅದ್ದೂರಿ ಚಿತ್ರ ‘ಫಾರೆಸ್ಟ್’ ಈ ವಾರ ಬಿಡುಗಡೆ ಕಾಣುತ್ತಿದೆ.
ಕಾಮಿಡಿ ಸ್ಟಾರ್ ಚಿಕ್ಕಣ್ಣ, ರಂಗಾಯಣ ರಘು, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಅದ್ದೂರಿತನದಿಂದ
ಕೂಡಿದೆ.
ಈಚೆಗೆ ನಡೆದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡಿತ್ತು.
ನಿರ್ಮಾಪಕ ಎನ್.ಎಂ.ಕಾಂತರಾಜ್, ನಿರ್ದೇಶಕ ಚಂದ್ರಮೋಹನ್, ಸಂಭಾಷಣೆ ಬರೆದಿರುವ ಸತ್ಯ ಶೌರ್ಯ ಸಾಗರ್ ಹಾಗೂ ಸಂಗೀತ ನಿರ್ದೇಶಕ ಧರ್ಮವಿಶ್ ಪಾಲ್ಗೊಂಡು ವಿವರಗಳನ್ನು ನೀಡಿದರು.
ಚಿತ್ರ ಅತ್ಯುತ್ತಮ ಸಾಹಸಗಳ ಫಲವಾಗಿದೆ. ಸಾಕಷ್ಟು ಖರ್ಚಾಗಿದೆ. ಕನ್ನಡ ಚಿತ್ರರಸಿಕರು ಈ ಚಿತ್ರವನ್ನು ಆನಂದದಿಂದ ಸ್ಬೀಕರಿಸುವರು ಎಂಬ ಭರವಸೆಯೂ ನನಗಿದೆ ಎಂದರು ನಿರ್ಮಾಪಕ ಕಾಂತರಾಜ್.
ಚಿತ್ರವನ್ನು ಸುಮಾರು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರಗಳನ್ನೂ ನೀಡಿದರು.
ಅರಣ್ಯದಲ್ಲಿ ನಡೆಯುವ ಒಂದು ಹುಡುಕಾಟ; ಆ ಸಮಯದಲ್ಲಿ ಎದುರಾಗುವ ಸಮಸ್ಯೆಗಳು, ಹಾಗೆಯೇ ಅನೇಕ ತಮಾಷೆಯ ಝಲಕ್ ಗಳು ನೋಡುಗರಿಗೆ ಮಜಾ ನೀಡಿತ್ತವೆ ಎಂದರು ನಿರ್ದೇಶಕ ಚಂದ್ರ ಮೋಹನ್.
ಅಲ್ಲದೆ ಮೈ ಜುಂ ಎನಿಸುವ ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಕಾಡಿನೊಳಗಿನ ವಿಸ್ಮಯಗಳನ್ನು ತೆರೆದಿಡುವಲ್ಲಿ ಅಪ್ರತಿಮ ನಿಗೂಢ ಶೋಧಗಳಿವೆ ಎಂದರು.
ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಶರಣ್ಯ ಶೆಟ್ಟಿ ಸಹ ಚಿತ್ರದ ಭಾಗವಾಗಿದ್ದಾರೆ. ಮಡಿಕೇರಿಯ ಸಂಪಂಜೆ ಕಾಡಿನಲ್ಲಿ ಚಿತ್ರಕ್ಕೆ 25 ದಿನಗಳ ಚಿತ್ರೀಕರಣ ನಡೆಸಲಾಗಿದೆ.
ಅಲ್ಲದೆ ಮಲೆ ಮಹದೇಶ್ವರ ಬೆಟ್ಟ, ಬೆಂಗಳೂರಿನಲ್ಲೂ ಚಿತ್ರೀಕರಣ ನಡೆಸಲಾಗಿದೆ. ಸತ್ಯ ಶೌರ್ಯ ಸಾಗರ್ ಕಥೆ ಚಿತ್ರಕಥೆ ಬರೆಯಲು ನೆರವಾಗಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆಯಲ್ಲ; ಬದಲಿಗೆ ಕಾಡಿನಲ್ಲಿರುವುದನ್ನು ಹುಡುಕುವ ಕಥೆ. ನನ್ನದು ಇದರಲ್ಲಿ ಮಂತ್ರವಾದಿ ಪಾತ್ರ ಎಂದರು ರಂಗಾಯಣ ರಘು.
ಅಮಾಯಕರ ಕಥೆಯಲ್ಲಿ ನನ್ನದು ಒಂದು ಪಾತ್ರವಿದೆ ಎಂದು ಚಿಕ್ಕಣ್ಣ ಹೇಳಿದರೆ, ಚಿತ್ರದಲ್ಲಿ ಅಮಾಯಕರಲ್ಲಿ ಅಮಾಯಕನ ನನ್ನದು ಎಂದವರು ಗುರುನಂದನ್.
ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ಬೇರೆ ಜಾನರ್ ನ ಚಿತ್ರ ಮಾಡಿದ್ದರೆ, ಅರ್ಚನಾ ಕೊಟ್ಟಿಗೆ ಸಾಹಸ ದೃಶ್ಯಗಳನ್ನು ಮಾಡಿರುವುದು
ವಿಶೇಷ ಎಂಬ ಮಾಹಿತಿಗಳು ಬಂದವು.
ಶರಣ್ಯ ಶೆಟ್ಟಿ ಕೂಡ ಈ ಚಿತ್ರದ ಭಾಗವಾಗಿದ್ದಾರೆ ಎಂಬ ವಿವರಗಳು ಬಂದವು.