Snehapriya.com

June 7, 2025

ಶ್ರೇಯಸ್ ವಿಷ್ಣು ಪ್ರಿಯ ಪ್ರೇಮಿಗಳ ಅಮರ ಕಾವ್ಯ

Social Share :

ಇದು ಇನ್ನೂ ಹದಿಹರೆಯದ ಯುವ ಪ್ರೇಮಿಗಳ ಪ್ರೇಮ ಕಥಾನಕ. ಒಂದು ರೀತಿಯಲ್ಲಿ ಪ್ರಕೃತಿ ಮಡಿಲಿನಲ್ಲಿ ನವಿಯುವ ‘ಅಮರ ಕಾವ್ಯ’.

ಗಂಡುಗಲಿ ನಿರ್ಮಾಪಕ ಕೆ.ಮಂಜು ಬಿಂದ್ಯಾ ಮೂವೀಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅವರ ಪುತ್ರ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕಣ್ಸನ್ನೆ ಖ್ಯಾತಿಯ ಪ್ರಿಯಾ ವಾರಿಯರ್ ಇದ್ದಾರೆ.

ಈಚೆಗೆ ನಡೆದ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ವಿಶೇಷತೆಗಳ ಬಗ್ಗೆ ವಿವರ ನೀಡುವಾಗ ಸ್ಯಾಂಡಲ್ ವುಡ್ ನ ಸ್ಟಾರ್ ಹಾಗೂ ಗಣ್ಯರು ಭಾಗವಹಿಸಿದ್ದರು.

ನಟ ಶ್ರೀಮುರಳಿ, ನಿರ್ಮಾಪಕ ರಮೇಶ್ ರೆಡ್ಡಿ, ನಟಿ ಸಪ್ತಮಿಗೌಡ, ಗೀತ ಸಾಹಿತಿ ಕವಿರಾಜ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೊಂದು ನವಿರು ಪ್ರೇಮ ಕಥೆ. ಕರ್ನಾಟಕದ ಊಟಿ ಚಿಕ್ಕಮಗಳೂರಿನ ರಮಣೀಯ ದೃಶ್ಯಗಳು ಗಮನ ಸೆಳೆಯುತ್ತವೆ. ಪ್ರಕೃತಿ ಮತ್ತು ಪ್ರೇಮದ ಬೆಸುಗೆ ಈ ಅಮರ ಕಾವ್ಯ.

ಚಿತ್ರದ ‘ಏಳು ಗಿರಿಗಳ ಏಳು ಕಡಲಿನ..’ ಎಂಬ ಡಾ.ನಾಗೇಂದ್ರಪ್ರಸಾದ್ ಬರೆದಿರುವ ಗೀತೆಯ ಇಂಗ್ಲಿಷ್ ಅವತರಣಿಕೆಯ ಸಾಲುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯದಲ್ಲಿ ಶ್ರೀಮುರಳಿ, ರಮೇಶ್ ರೆಡ್ಡಿ, ಕವಿರಾಜ್, ಶ್ರೇಯಸ್ ಭಾಗವಹಿಸಿದ್ದು ವಿಶೇಷವಾಗಿತ್ತು.

ಜೊತೆಗೆ ಕೆ.ಮಂಜು, ಪ್ರಿಯಾ ವಾರಿಯರ್ ಹಾಗೂ ಚಿತ್ರತಂಡದವರು ಸಾಥ್ ನೀಡಿದರು. ಇದೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.

ಮುಂದಿನ ತಿಂಗಳು ಅಂದರೆ ಫೆಬ್ರವರಿ 21 ರಂದು ಚಿತ್ರವು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಚಿತ್ರದ ಪ್ರಚಾರ ಕಾರ್ಯ ವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ.

ಮಲಯಾಳಂ ಮೂಲದ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಾಹಕ.
ತೆಲುಗು ಮೂಲದ ಗೋಪಿ ಸುಂದರ್ ಸಂಗೀತ ನಿರ್ದೇಶಕ.

ವಿ.ಕೆ.ಪ್ರಕಾಶ್ ಅವರಿಗೆ ಕನ್ನಡದಲ್ಲಿ ಇದು ಎರಡನೇ ಚಿತ್ರ. ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದಾರೆ ಎಂಬ ವಿವರಗಳು ಬಂದವು.

ಅತ್ಯುತ್ತಮ ಕಥಾವಸ್ತು ಇರುವ ಚಿತ್ರಗಳು ಮೊದಲು ಆರಂಭವಾಗಿದ್ದೇ ಕನ್ನಡದಲ್ಲಿ. ಆನಂತರ ಮಲಯಾಳಂ ಹಾಗೂ ಇತರ ಭಾಷೆಗಳು ಆಯ್ಕೆ ಮಾಡಿಕೊಂಡವು. ಬಿ.ವಿ.ಕಾರಂತ್ ಹಾಗೂ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳು ನನಗೆ ಸ್ಫೂರ್ತಿ ಯಾಗಿದ್ದವು ಎಂಬುದನ್ನು ನಿರ್ದೇಶಕ ವಿ.ಕೆ.ಪ್ರಕಾಶ್ ಮೆಲುಕು ಹಾಕಿದರು.

ಇದೊಂದು ಅತ್ಯುತ್ತಮ ಪ್ರೇಮಕಥೆ. ಹಾಗಾಗಿ ಯುವ ಸಮುದಾಯವನ್ನು ಖಂಡಿತಾ ತಲುಪುತ್ತದೆ ಎಂಬ ವಿಶ್ವಾಸವನ್ನು ನಿರ್ಮಾಪಕ ಕೆ.ಮಂಜು ವ್ಯಕ್ತಪಡಿಸಿದರು.

ಚಿತ್ರದ ಬಿಡುಗಡೆ ತಡವಾಗಿರುವುದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡಂತೆ ಮಾತನಾಡಿದ ಶ್ರೇಯಸ್ ‌ಲೇಟ್ ಆದ್ರು ಲೇಟೆಸ್ಟ್ ಆಗಿ ಚಿತ್ರ ಬಿಡುಗಡೆ ಕಾಣುತ್ತಿದೆ ಎಂದರು.

ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಅವರಂತಹ ಹಿರಿಯ ಕಲಾವಿದರ ತಾರಾಗಣವಿರುವ ಈ ಚಿತ್ರಕ್ಕೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *