Snehapriya.com

June 7, 2025

ಸಂಜು ವೆಡ್ಸ್ ಗೀತಾ-2 ಬಿಡುಗಡೆಗೆ ನ್ಯಾಯಾಲಯದ ಅನುಮತಿ..

Social Share :

* ಜನವರಿ 17ಕ್ಕೆ ಚಿತ್ರ ಬಿಡುಗಡೆ *

ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತ-2’ ಚಿತ್ರದ ಬಿಡುಗಡೆಗಿದ್ದ ತೊಡಕು ನಿವಾರಣೆಗೊಂಡಿದ್ದು, ಇದೇ ವಾರ ಅಂದರೆ ಜನವರಿ 17ರಂದು ಚಿತ್ರ ಬಿಡುಗಡೆ ಕಾಣುತ್ತಿದೆ.

ಕಳೆದ ವಾರ (ಜನವರಿ 10)ರಂದು ಬಿಡುಗಡೆ ಕಾಣಬೇಕಿದ್ದ ‘ಸಂಜು ವೆಡ್ಸ್ ಗೀತ-2’ ಚಿತ್ರದ ಮೇಲಿದ್ದ ತಡೆಯಾಜ್ಞೆ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರದ ಬಿಡುಗಡೆಗೆ ನ್ಯಾಯಾಲಯದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಈ ವಾರ (ಜನವರಿ 17) ಚಿತ್ರ ಬಿಡುಗಡೆ ಕಾಣುತ್ತಿದೆ.

‘ಸಂಜು ವೆಡ್ಸ್ ಗೀತ-2’ ನಿರ್ದೇಶಕ ನಾಗ್ ಶೇಖರ್ ಹಾಗೂ ತೆಲುಗು ನಿರ್ಮಾಪಕರ ನಡುವಿನ ಹಿಂದಿನ ಒಡಂಬಡಿಕೆ ಈ ತಡೆಯಾಜ್ಞೆಗೆ ಕಾರಣವಾಗಿತ್ತು ಎಂಬುದನ್ನು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ವಿವರ ನೀಡಿತು.

ನಾಗ್ ಶೇಖರ್ ಮೂವೀಸ್ ಎಂಬುದನ್ನು ಉಲ್ಲೇಖಿದಿದ್ದು, ಇಷ್ಟಕ್ಕೆಲ್ಲಾ ಕಾರವಾಯಿತು. ಬಳಿಕ ನಿರ್ಮಾಪಕ ಛಲವಾದಿ ಕುಮಾರ್ ಹೈದ್ರಾಬಾದ್ ಗೆ ತೆರಳಿ ನಾನೊಬ್ಬನೇ ನಿರ್ಮಾಪಕ ಎಂದು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದೂ ಅಲ್ಲದೆ ನಾಲ್ಕುವರೆ ಕೋಟಿ ರೂಪಾಯಿಗಳ ಜಾಮೀನಿಗೆ ಜಮೀನು ಪತ್ರಗಳನ್ನು ನೀಡಿ ಚಿತ್ರ ಬಿಡುಗಡೆಗೆ ಅನುಮತಿ ಪಡೆದುಕೊಂಡಿದ್ದಾರೆ ಎಂಬ ವಿವರಣೆ ಬಂತು ತಂಡದಿಂದ..

ನ್ಯಾಯಾಲಯದ ತಡೆಯಾಜ್ಞೆ ತೆರೆವಿಗೆ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ಜಾಮೀನು ಸಂಬಂಧಿತ ವಿಷಯಕ್ಕೆ ಜಮೀನು ಪತ್ರಗಳನ್ನು ನೀಡಿ ಚಿತ್ರದ ಬಿಡುಗಡೆಗೆ ಅನುಮತಿ ಪಡೆದುಕೊಂಡಿರುವುದಾಗಿ ವಿವರಗಳು ಬಂದವು.

ಛಲವಾದಿ ಕುಮಾರ್ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಚಿತ್ರ ನಿರ್ಮಿಸಿರುವುದಾಗಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಚಿತ್ರ ಬಿಡುಗಡೆ ಕಾಣುತ್ತಿದೆ ಎಂಬ ವಿವರ ನೀಡಿದರು ನಾಗ್ ಶೇಖರ್.

ನಿರ್ಮಾಪಕ ಛಲವಾದಿ‌ ಕುಮಾರ್, ನಿರ್ದೇಶಕ ನಾಗಶೇಖರ್, ಕಥೆಗಾರ ಚಂದ್ರಚೂಡ್, ನಾಯಕ ನಟ ಶ್ರೀನಗರ ಕಿಟ್ಟಿ ಜತೆಗೆ ಸಹ‌ ನಿರ್ಮಾಪಕ ಕಿಟ್ಟಿ ಮಂಡ್ಯ ಕೂಡ‌ ಹಾಜರಿದ್ದರು.

ಚಿತ್ರದ ಬಿಡುಗಡೆ ಮುಂದಕ್ಕೆ ಹೋದ ಬಳಿಕ ಅನೇಕರು ನಿರ್ಮಾಪಕರ ವಿರುದ್ಧ ಮನಸ್ಸೋ ಇಚ್ಚೆ ಬರೆಯುತ್ತಿದ್ದಾರೆ. ಆದರೆ ನಿಜವಾದ ಕಾರಣ ನಮಗೆ ತಡೆಯಾಜ್ಞೆಯ ವಿಷಯ ತಡವಾಗಿ ತಿಳಿದಿದ್ದೇ ಆಗಿದೆ ಎಂಬ ವಿವರ ಬಂತು ಚಿತ್ರತಂಡದಿಂದ..

ತಡೆಯಾಜ್ಞೆ ತೆರವುಗೊಳಿಸಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಜಾಮೀನು ಪತ್ರ ನೀಡಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ಪಡೆಯಲಾಗಿದೆ. ಇದೇ ಸತ್ಯಾಂಶವಾಗಿದೆ ಎಂಬುದಾಗಿ ವಿವರ ಕೊಟ್ಟರು ಛಲವಾದಿ ಕುಮಾರ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *