Snehapriya.com

June 9, 2025

ಪ್ಯಾನ್ ಇಂಡಿಯಾ ಆದ ಕೋರ ಸುನಾಮಿ ಕಿಟ್ಟಿಗೆ ಒಲಿದ ಅದೃಷ್ಟ

Social Share :

ಬಹಳ ವರ್ಷಗಳ ಗ್ಯಾಪ್ ನ ಬಳಿಕ ಒರಟ ನಿರ್ದೇಶಕ ಒರಟ ಶ್ರೀ ನಿರ್ದೇಶನ ಮಾಡಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಪರಭಾಷೆಯಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿರುವುದು ಹೆಗ್ಗಳಿಕೆ.

ಅದೇ ಕೋರ..!

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಈ ಅದ್ದೂರಿ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ರಿಯಾಲಿಟಿ ಶೋ ಹೀರೋ ಸುನಾಮಿ ಕಿಟ್ಟಿ.

ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ಸಾಹಸ ಮೆರೆದಿರುವ ಈ ಚಿತ್ರದಲ್ಲಿ ವಿಶೇಷತೆಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿ ಚಿತ್ರತಂಡ ಖುಷಿಯಿಂದ ತೇಲಾಡಿದೆ.

ಈಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಮೆರೆದ ಸಾಹಸಗಳನ್ನು ಪ್ರತಿಯೊಬ್ಬರೂ ಮೆಲುಕು ಹಾಕಿದ್ದು ವಿಶೇಷ. ಬಿಡುಗಡೆ ಕಂಡಿರುವ ‘ಒಪ್ಪಿಕೊಂಡವಳು..’ ಮಿಲಿಯನ್ ವೀಕ್ಷಣೆ ಪಡೆದಿದೆ ಎಂದೂ ಸಂಭ್ರಮಿಸಿತು ಚಿತ್ರತಂಡ.

ಸಾಹಿತಿ ರೇವಣ್ಣ ನಾಯಕ್ ಬರೆದಿರುವ ಹಾಗೂ ಹೇಮಂತ್ ಕುಮಾರ್ ಸಂಗೀತ ನೀಡಿರುವ ‘ಒಪ್ಪಿಕೊಂಡಳು’ ಹಾಡು ಇತ್ತೀಚಿಗೆ ರಬಕವಿಯಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಬಿಡುಗಡೆ ಕಂಡಿದ್ದು ವಿಶೇಷ.

ಕೋರ ಎಂಬುದು ಬುಡಕಟ್ಟು ಸಮುದಾಯದ ಹೆಸರು. ಕಥೆ ದಟ್ಟ ಅರಣ್ಯದಲ್ಲಿ ನಡೆಯುತ್ತದೆ. ಹಾಗಾಗಿ ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅನುಕೂಲತೆ ಕಡಿಮೆ ಇದ್ದರೂ ಕಷ್ಟಪಟ್ಟು ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರ ನೀಡಿದರು ನಿರ್ಮಾಪಕ ಪಿ.ಮೂರ್ತಿ.

ಜನವರಿ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಈಗಾಗಾಲೇ ಚಿತ್ರದ ತೆಲುಗು, ತಮಿಳು ರಿಮೇಕ್ ಹಕ್ಕುಗಳು ಮಾರಾಟವಾಗಿವೆ. ಆಂಧ್ರದಲ್ಲಿ ಬಾಲಾಜಿ ಅವರು ವಿತರಣೆ ಮಾಡುತ್ತಿದ್ದು, ತಮಿಳುನಲ್ಲಿಯೂ ಚಿತ್ರವನ್ನು ಹೆಸರಾಂತ ವಿತರಕರೇ ಮಾಡುತ್ತಿದ್ದಾರೆ ಎಂಬ ವಿವರ ಕೊಟ್ಟರು.

ಒಂದು ದೊಡ್ಡ ಗ್ಯಾಪ್ ನ ಬಳಿಕ ಈ ಚಿತ್ರ ನಿರ್ದೇಶನ ಮಾಡಿರುವೆ. ಇಲ್ಲಿ ಸುನಾಮಿ ಕಿಟ್ಟಿ ಧೈರ್ಯವಂತಿಕೆ ಬಹಳ ದೊಡ್ಡದು. ಅದೇ ರೀತಿ ಹಣ ಹೂಡಿಕೆ ಮಾಡಿರುವ ಪಿ.ಮೂರ್ತಿ ಅವರ ಧೈರ್ಯ ಕೂಡ ದೊಡ್ಡದು ಎಂದರು ನಿರ್ದೇಶಕ ಒರಟ ಶ್ರೀ.

ಪತ್ರಕರ್ತರೂ ಆಗಿರುವ ಯತಿರಾಜ್ ಚಿತ್ರತಂಡದ ಸಾಹಸಗಳನ್ನು ವರ್ಣಿಸಿದರು. ಅದರಲ್ಲಿಯೂ ನಟಿ ಸೌಜನ್ಯ ಗರ್ಭಿಣಿಯಾಗಿ ಮತ್ತು ಮಗುವಿನ ತಾಯಿಯಾಗಿ ಅನುಭವಿಸಿದ ಕಷ್ಟದ ಸಂದರ್ಭಗಳನ್ನು ನೆನೆದರು.

ನಿರ್ಮಾಪಕ ಪಿ.ಮೂರ್ತಿ ಖಳನ ಪಾತ್ರವನ್ನು ನಿರ್ವಹಿಸಿದ್ದು, ಇತರ ಪಾತ್ರಗಳಲ್ಲಿ ಗಣೇಶ್ ರಾವ್, ಎಂ.ಕೆ.ಮಠ ಮೊದಲಾದವರು ಅಭಿನಯಿಸಿದ್ದು, ಅವರು ತಮ್ಮ ಅನುಭವಗಳನ್ನು ಹೇಳಿಕೊಂಡರು.

ಸುನಾಮಿ ಕಿಟ್ಟಿ ಜೋಡಿಯಾಗಿ ಚರಿಷ್ಮಾ ಕಾಣಿಸಿಕೊಂಡಿದ್ದು, ಸೌಜನ್ಯ ಅವರ ಪಾತ್ರಕ್ಕೆ ಎರಡು ಶೆಡ್ ಇದೆ ಎಂಬ ವಿವರಗಳು ಬಂದವು.

ಸಹ ನಿರ್ಮಾಪಕ ಚೆಲುವರಾಜು, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತೆಲುಗು ವಿತರಕ ಬಾಲಾಜಿ ಚಿತ್ರದ ಕುರಿತು ಮಾತನಾಡಿದರು.

ನಟ ಒರಟ ಪ್ರಶಾಂತ್ ಚಿತ್ರತಂಡಕ್ಕೆ ಶುಭ ಕೋರಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *