Snehapriya.com

June 5, 2025

ಮಂಡ್ಯ ಹೈದ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5

ನಿರ್ಮಾಣ : ಎಸ್.ಚಂದ್ರಶೇಖರ್

ನಿರ್ದೇಶನ : ವಿ.ಶ್ರೀಕಾಂತ್

ಸ್ನೇಹನಾ.. ಪ್ರೀತಿನಾ..

ಗ್ರಾಮೀಣ ಭಾಗದಲ್ಲಿ ಸಂಬಂಧಗಳು ವಿಶಿಷ್ಟ ಮತ್ತು ವಿಚಿತ್ರ. ಸ್ನೇಹ ಮತ್ತು ಪ್ರೀತಿ ಬೇರೆ ಬೇರೆ ಭಾವಗಳಲ್ಲಿ ನೋಡಿದರೂ ಇವೆರಡೂ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತವೆ..

ಇಲ್ಲಿ ಕೂಡ ಅದೇ ಸ್ನೇಹ ಮತ್ತು ಪ್ರೀತಿ ಹಾಗೆಯೇ ಸಂಬಂಧಗಳ ಸುತ್ತ ಕಥೆ ಹೆಣೆಯಲಾಗಿದೆ. ಶಿವು ಸ್ನೇಹಕ್ಕೆ ಪ್ರಾಣ ಕೊಡುವವನು. ಆದರೆ ಯಾರಾದರೂ ಪ್ರೀತಿ ಮಾಡಿದರೆ ಅದನ್ನು ಮುರಿದು ಹಾಕುವುದು ಆತನ ಮತ್ತು ಸ್ನೇಹ ವಲಯದ ಪ್ರಮುಖ ಕರ್ತವ್ಯ..

ಇವರಿಂದಾಗಿ ಪ್ರೇಮಿಸಿ ದೂರವಾದ ಭಗ್ನ ಪ್ರೇಮಿಗಳ ದೊಡ್ಡ ತಂಡವೇ ಆ ಗ್ರಾಮದಲ್ಲಿ ಇರುತ್ತದೆ ಮತ್ತು ಆ ತಂಡ ಅಲ್ಲಿನ ಬಾರ್ ಗೆ ಪ್ರಮುಖ ಗಿರಾಕಿಗಳು..

ಓಡಿ ಹೋಗಲು ಬರುವ ಪ್ರೇಮಿಗಳು; ಅದಕ್ಕೆ ಕಲ್ಲು ಹಾಕುವ ಶಿವನ ಗ್ಯಾಂಗ್. ಇಂತಹ ಕಣ್ಣಾ‌ಮುಚ್ಚಾಲೆ ಆಟದಲ್ಲಿ ಮೊದಲರ್ಧ‌ ಮುಗಿಯುತ್ತದೆ.

ಆನಂತರ ಆರಂಭವಾಗುವುದು ಶಿವ ಮತ್ತು ಪ್ರಿಯ ನಡುವಿನ ಪ್ರೇಮ..! ಈ ಪ್ರೇಮಕ್ಕೆ ಸ್ನೇಹಿತರಿಂದಲೇ ನೂರೆಂಟು ಅಡ್ಡಿಗಳು. ಸ್ನೇಹ ಮತ್ತು ಪ್ರೇಮದ ನಡುವಿನ ಜಂಜಾಟ.

ಕೊನೆಗೆ ಸ್ನೇಹ ಮತ್ತು ಪ್ರೇಮ ಎರಡರಲ್ಲೂ ಗೆದ್ದರೂ ಶಿವನದು ಬೇರೆಯದೇ ದಾರಿಯಾಗುತ್ತದೆ. ಆಗ ಪ್ರೇಕ್ಷಕನ ಹೃದಯ ಆರ್ಧ್ರಗೊಳ್ಳುತ್ತದೆ. ಕಣ್ಣೀರು ಹನಿಯಾಗುತ್ತದೆ..

ಯಶ್ ಅವರು ನಿರ್ವಹಿಸಿದ್ದ ‘ಕಿರಾತಕ’ , ‘ರಾಜಾಹುಲಿ’ ಮಾದರಿಯಲ್ಲೇ ಮಂಡ್ಯ ಹೈದ ಸಂಪೂರ್ಣ ಗ್ರಾಮೀಣ ಭಾಗದ ಕಥೆ. ಪ್ರೇಕ್ಷಕನಿಗೆ ಕೊಂಚವೂ ತಾಸ್ರಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವುದೇ ವಿಶೇಷ.

ಶಿವು ಪಾತ್ರದಲ್ಲಿ ಅಭಯ್ ಪಾತ್ರ ನಿರ್ವಹಣೆ ಉತ್ತಮ. ಹಾಗೆಯೇ ಸಾಹಸ ದೃಶ್ಯಗಳಲ್ಲಿ ಸಾಮರ್ಥ್ಯ ಮೆರೆದಿದ್ದಾರೆ. ಭೂಮಿಕಾ ಅಭಿನಯವೂ ಗಮನ ಸೆಳೆಯುತ್ತದೆ. ತಂದೆಯ ಪಾತ್ರದಲ್ಲಿ ಬ.ಲ.ರಜವಾಡಿ ಅವರದು ಮಾಗಿದ ಅಭಿನಯ. ಎಸ್.ಚಂದ್ರಶೇಖರ್ ಕೂಡ ಅಭಿನಯದಲ್ಲೂ ಗಮನ ಸೆಳೆಯುತ್ತಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳ ಗುಂಪು ಅಭಿನಯದಲ್ಲಿ ತಮ್ಮದೇ ಪ್ರಭಾವಗಳನ್ನು ಉಳಿಸಿಕೊಂಡಿದ್ದಾರೆ.

ಸುರೇಂದ್ರನಾಥ್ ಸಂಗೀತ ಹಾಗೂ
ಮನುಗೌಡ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *