ಯುವನಟ ಅಭಯ್ ಚಂದ್ರಶೇಖರ್ ಮುಖ್ಯ ಪಾತ್ರದಲ್ಲಿರುವ ಸಂಪೂರ್ಣ ಗ್ರಾಮೀಣ ಭಾಗದ ಚಿತ್ರಣ ಹೊಂದಿರುವ ‘ಮಂಡ್ಯ ಹೈದ’ ಚಿತ್ರದ ಮತ್ತೊಂದು ಹಾಡು ಬಿಡುಗಡೆಗೊಂಡಿದೆ.
ಅಭಯ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ಆಟೋ ಚಾಲಕರು ಸಮಾರಂಭ ಏರ್ಪಡಿಸಿ ಸಂಭ್ರಮಿಸಿದ್ದಾರೆ.
ಮಂಡ್ಯದ ಹುಡುಗನೊಬ್ಬನ ಪ್ರೇಮ ಮತ್ತು ಅದರ ಸುತ್ತ ನಡೆಯುವ ಘಟನೆಗಳು ಥ್ರಿಲ್ ಆಶಯಗಳನ್ನು ಹೊಂದಿರುವ ಚಿತ್ರದಲ್ಲಿ ಮಂಡ್ಯ ಹೈದನಾಗಿ ಯುವನಟ ಅಭಯ್ ಚಂದ್ರಶೇಖರ್ ಕಾಣಿಸಿಕೊಂಡಿಸಿದ್ದು, ಅವರ ಎದುರು ಭೂಮಿಕಾ ನಟಿಸಿದ್ದಾರೆ.
ಈ ಹಿಂದೆ ‘ಮನಸಾಗಿದೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಅಭಯ್, ಈಗ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯಹುಡುಗನಾಗಿ ಹೊರ ಹೊಮ್ಮಿದ್ದಾರೆ. ವಿ.ಶ್ರೀಕಾಂತ್ ನಿರ್ದೇಶನದ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮನುಗೌಡ ಛಾಯಾಗ್ರಹಣವಿದೆ.
ಬ.ಲ.ರಾಜವಾಡಿ, ಸುನಂದ ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಕಥೆಗೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.