ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.
ಕನ್ನಡದ ಮೊದಲ ಪ್ರಚಾರಕರ್ತರಾಗಿದ್ದ ದಿವಂಗತ ಡಿ.ವಿ.ಸುಧೀಂದ್ರ ಅವರು ಆರಂಭಿಸಿದ ಸಂಸ್ಥೆ ಹಾಗೂ ಪ್ರಶಸ್ತಿ ನೀಡಿಕೆಯ ಪರಂಪರೆಯನ್ನು ಸದ್ಯದ ಮುಂಚೂಣಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಮುಂದುವರೆಸಿರುವುದು ವಿಶೇಷ.
ಈ ಸಾಲಿನ ಪ್ರಶಸ್ತಿಗಳ ವಿವರ ಹೀಗಿದೆ;
ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗೆ ಹಿರಿಯ ನಿರ್ಮಾಪಕ ದಿವಂಗತ ರಾಮು (ಮರಣೋತ್ತರವಾಗಿ) ಹಾಗೂ ಹಿರಿಯ ಪತ್ರಕರ್ತ ಮುರಳಿಧರ ಖಜಾನೆ ಅವರನ್ನು ಆಯ್ಕೆ ಮಾಡಲಾಗಿದೆ
ಹಿನ್ನೆಲೆ ಗಾಯಕ ಹೇಮಂತ್ ಕುಮಾರ್ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ
ಯಜಮಾನ ಚಿತ್ರದ ಖ್ಯಾತಿ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ.
ನಟಿ ಜಯಲಕ್ಷ್ಮಿ ಪಿ (ದುಬೈ) ಅವರಿಗೆ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ ನೀಡಲಾಗುತ್ತಿದೆ.
ಹಾಗೆಯೇ ಸಂಗೀತ ನಿರ್ದೇಶಕ
ಜೋ ಕೋಸ್ಟ ಅವರಿಗೆ ‘ಹೊಂದಿಸಿ ಬರೆಯಿರಿ’ ಚಿತ್ರಕ್ಕಾಗಿ ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ.
ನಿರ್ದೇಶಕ ಹೇಮಂತ್ ರಾವ್ ಅವರಿಗೆ ಅತ್ಯುತ್ತಮ ಕಥಾಲೇಖಕರು (ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ) ಕೆ.ವಿ. ಜಯರಾಂ ಪ್ರಶಸ್ತಿ.
ಬಿ.ಎಸ್. ಲಿಂಗದೇವರು ಹಾಗೂ ಶರಣು ಹುಲ್ಲೂರು ಅವರಿಗೆ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ.
ಕುಮಾರಿ ಸಿಂಧು ಶ್ರೀನಿವಾಸಮೂರ್ತಿ ಅವರಿಗೆ ಮೊದಲ ನಿರ್ದೇಶನದ ಪ್ರಶಸ್ತಿ ಆಚಾರ್ & ಕೋ ಚಿತ್ರದ ನಿರ್ದೇಶನಕ್ಕಾಗಿ ಬಿ.ಸುರೇಶ್ ಪ್ರಶಸ್ತಿ.
ಡಾಲಿ ಧನಂಜಯ ಅವರಿಗೆ ಟಗರು ಪಲ್ಯ ಚಿತ್ರದ ಗೀತರಚನೆಗಾಗಿ
ಹಿರಿಯ ಪತ್ರಕರ್ತ ದಿವಂಗತ ಪಿ.ಜಿ. ಶ್ರೀನಿವಾಸಮೂರ್ತಿ ಸ್ಮರಣಾರ್ಥ ಪ್ರಶಸ್ತಿ.
ನಟ ಸುಂದರರಾಜ್ ಅವರಿಗೆ
ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.