* ಈ ವಾರ ಬಿಡುಗಡೆಯ ಚಿತ್ರ
* ದುನಿಯಾ ವಿಜಯ್ ಹೊಗಳಿಕೆ
* ಮಂತ್ರಿಮಾಲ್ ನಲ್ಲಿ ಅಭಿಮಾನಿ ಸಾಗರ
ಈಗಾಗಲೇ ಹಾಡಿನ ಮೂಲಕ ಅಭಿಮಾನಿಗಳ ಮನದಲ್ಲಿ ಕಚಗುಳಿ ಇಟ್ಟಿರುವ ಫೈಟರ್ ಚಿತ್ರದ ಸಾಹಸದ ಅಂಶಗಳನ್ನು ಮನದುಂಬಿಕೊಳ್ಳಲು
ಕಾತರ ಹೆಚ್ಚಾಗಿದೆ.
ಏಕೆಂದರೆ ಈಚೆಗೆ ಬೆಂಗಳೂರಿನ ಮಂತ್ರಿ ಮಹಲ್ ನಲ್ಲಿ ನಡೆದ ಫೈಟರ್ ಉತ್ಸವದಲ್ಲಿ ಅಭಿಮಾನಿಗಳ ದಂಡು ನಕ್ಕು ನಲಿಯಿತು. ಅತಿಯಾದ ಕೇಕೆ ಸಿಳ್ಳೆಗಳಿಂದ ಚಿತ್ರತಂಡವನ್ನು ಪ್ರೇರೇಪಿಸಿತು.
ಸ್ಯಾಂಡಲ್ ವುಡ್ ನ ಫೈಟರ್ ಗಳಾದ ನಟ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ ಹಾಗೂ ಇನ್ನಿತರ ಸ್ಟಾರ್ ಗಳು ನೆರೆದ ಅಭಿಮಾನಿಗಳ ಮುಂದೆ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮಂತ್ರಿ ಮಹಲ್ ನ ಎಲ್ಲಾ ಫ್ಲೋರ್ ಗಳಲ್ಲೂ ನಿಂತು ವೀಕ್ಷಿಸಿದ ಜನ ಸಾಗರಕ್ಕೆ ಚಿತ್ರತಂಡವನ್ನು ನೋಡುವುದೇ ಸೊಗಸು. ಸಂಗೀತ ನಿರ್ದೇಶಕ ಗುರು ಕಿರಣ್, ನಟಿಯರಾದ ಪಾವನಾ ಗೌಡ, ಲೇಖಾ ಚಂದ್ರ, ವಿನೋದ್ ಪ್ರಭಾಕರ್, ನಿರ್ದೇಶಕ ನೂತನ್ ಉಮೇಶ್, ನಿರ್ಮಾಪಕ ಸೋಮಶೇಖರ್ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಒಬ್ಬ ಫೈಟರ್ ಅಥವಾ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವ ನಟನ ಬದುಕು ಯಾವಾಗಲೂ ಸವಾಲಿನದೇ ಆಗಿರುತ್ತದೆ. ಅದಕ್ಕಾಗಿ ನಟ ದೊಡ್ಡ ತ್ಯಾಗವನ್ನೇ ಮಾಡಬೇಕಾಗಿರುತ್ತದೆ ಎಂದರು ದುನಿಯಾ ವಿಜಯ್.
ದೇಹವನ್ನು ಹುರಿಗೊಳಿಸುವುದು. ಸಿನಿಮಾಗಾಗಿ ಮಡಿಕೆಗಳನ್ನು (ಪ್ಯಾಕ್ಸ್) ಮಾಡುವುದು ಸುಲಭವಲ್ಲ. ಅದು ನಿತ್ಯದ ಕಷ್ಟ. ನಟರಾದ ನಾವು ಅದನ್ನು ಅನುಭವಿಸುತ್ತೇವೆ. ಆದರೆ ಯಾರ ಜೊತೆಯೂ ಹೇಳಿಕೊಳ್ಳುವುದಿಲ್ಲ ಎಂದು ಹೇಳುತ್ತಾ ಹೋದರು.
ವಿನೋದ್ ಪ್ರಭಾಕರ್ ಅವರ ತಂದೆ ಪ್ರಭಾಕರ್ ಅವರ ಧ್ವನಿ ಮತ್ತು ಭಾವಭಂಗಿಯನ್ನು ಪ್ರದರ್ಶಿಸುವುದರ ಮೂಲಕ ಅಭಿಮಾನಿಗಳ ಗಮನ ಸೆಳೆದರು.