Snehapriya.com

June 8, 2025

ಬೆಂಬಿಡದ ಬೆನ್ನು ನೋವು ಜಗ್ಗೇಶ್ ಧಿಡೀರ್ ಆಸ್ಪತ್ರೆಗೆ..

Social Share :

ಕಳೆದ ಒಂದು ವಾರದಿಂದ ಬದ್ರಿ ಕೇದಾರನಾಥ, ಹರಿದ್ವಾರ ಮುಂತಾದ ಪುಣ್ಯ ಕ್ಷೇತ್ರಗಳ ಕಡೆ ಓಡಾಡುತ್ತ ದೇವರ ಸ್ಮರಣೆಯಲ್ಲಿದ್ದ ನವರಸ ನಾಯಕ ಜಗ್ಗೇಶ್ ಇಂದು (ಸೆಪ್ಟೆಂಬರ್ 29) ಧಿಡೀರ್ ಆಸ್ಪತ್ರೆಗೆ ‌ದಾಖಲಾಗಿದ್ದಾರೆ.

ಸದ್ಯ ದೆಹಲಿಯಲ್ಲಿವ ಜಗ್ಗೇಶ್ ಅವರು ಅತಿಯಾದ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.

ನಿನ್ನೆ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿದ್ದ ‘ತೋತಾಪುರಿ-2’ ಚಿತ್ರ ಬಿಡುಗಡೆ ಕಂಡಿತ್ತು. ಅದರ ಪ್ರಚಾರದಲ್ಲಿಯೂ ನವರಸ ನಾಯಕರು ಕಾಣಿಸಿಕೊಂಡಿರಲಿಲ್ಲ.

ಬದ್ರಿ ಕೇದಾರನಾಥ, ಹರಿದ್ವಾರ ಶಿವನ ಸನ್ನಿಧಿ ನನಗೆ ಪ್ರೀತಿ ಪಾತ್ರ ಸ್ಥಳವಾಗಿದೆ. ಜೀವನ ಅರ್ಥೈಸುವುದು ಸಾಧ್ಯವಾಗಿದೆ ಎಂದು ಅವರು ‘ಸ್ನೇಹಪ್ರಿಯ’ಗೆ ತಿಳಿಸಿದ್ದರು.

ಅಲ್ಲದೆ ಕಾವೇರಿ ಹೋರಾಟದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಾನು ಕನ್ನಡದ ಮಣ್ಣಿನ ಮಗ, ಕಾವೇರಿ ನನ್ನ ತಾಯಿ. ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದೆ. ದೂರ ಉಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

ಜಗ್ಗೇಶ್ ಅವರಿಗೆ ಎರಡು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ಆಪ್ತರು ಮಾಹಿತಿ ನೀಡಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *