* ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದ ಬಿಡುಗಡೆ
* 27 ಫ್ರೇಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್
ನಿರ್ಮಾಣ.
* ಕಥೆ, ಸಂಕಲನ, ನಟನೆ, ನಿರ್ದೇಶನ ಮಂಜುನಾಥ್ ಬಿ.ನಾಗಬಾ
ಮಂಜುನಾಥ್ ಬಿ ನಾಗಬಾ ನಿರ್ದೇಶನದ ‘ಗರುಡ ಪುರಾಣ’ ಟೀಸರ್ ಬಿಡುಗಡೆ ಕಂಡಿದ್ದು, ನೀತಿ ಪಾಠ ಹೇಳುವ ಕಥೆ ಚಿತ್ರದಲ್ಲಿದೆ.
ಸೆಪ್ಟೆಂಬರ್ 25ರ ಸೋಮವಾರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಮಾಜಿ ಶಾಸಕರಾದ ರಾಜು ಗೌಡ, ತಿಪ್ಪರಾಜು, ಡಿ.ಎಸ್.ಮ್ಯಾಕ್ಸ್ ನ ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚ್ಚಣ್ಣ, ನಟ ಮಣಿಕಂಠ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸೂಪರ್ ಹಿಟ್ ಚಿತ್ರ ‘ಕಾಂತಾರ’ ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿರುವ ಮಂಜುನಾಥ್, ಈ ಚಿತ್ರದ ಮೂಲಕ ನಿರ್ದೇಶನದ ಕ್ಯಾಪ್ ಹಾಕಿದ್ದಾರೆ.
ಕಾಂತಾರ ಹೆಸರು ತಂದು ಕೊಟ್ಟಿತು. ಅಲ್ಲದೆ ಈ ರೀತಿ ಸಿನಿಮಾ ಮಾಡುವ ಪ್ರೇರಣೆಯೂ ಅದರಿಂದ ಬಂದಿದೆ. ‘ಗರುಡ ಪುರಾಣ’ ವು ತಪ್ಪು ಮಾಡಿದವರು ಒಂದಿಲ್ಲ ಒಂದು ರೀತಿಯಲ್ಲಿ ಶಿಕ್ಷೆ ಅನುಭವಿಸಲೇ ಬೇಕು ಎಂಬ ಸಂದೇಶವನ್ನು ಹೇಳುವ ಸಿನಿಮಾ ಎಂಬುದು ನಿರ್ದೇಶಕ ಮಂಜುನಾಥ್ ನೀಡಿದ ವಿವರಣೆ.
ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಕಾರಣರಾದವರಿಗೆ ಧನ್ಯವಾದ ಎಂದರು ನಿರ್ದೇಶಕ ಕಮ್ ನಟ ಮಂಜುನಾಥ್ ನಾಗಬಾ.
ಚಿತ್ರದ ನಿರ್ಮಾಪಕರಾದ ಸಿಂಧು ಕೆ.ಎಂ ಹಾಗೂ ಬಿ.ಎಲ್ ಯೋಗೇಶ್ ಕುಮಾರ್ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ಪ್ರಮುಖ ಪಾತ್ರದಲ್ಲಿರುವ ನಟಿ ದಿಶಾ ಶೆಟ್ಟಿ , ಭಜರಂಗಿ ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಹಾಡುಗಳ ಬಗ್ಗೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣದ ಕುರಿತು ಮಾಹಿತಿ ನೀಡಿದರು.