Snehapriya.com

June 9, 2025

ನಿರ್ಮಾಪಕ ಬೆಂ.ಕೋ.ಶ್ರೀ. ಪುತ್ರನ ವಿವಾಹ ಮಹೋತ್ಸವ

Social Share :

ಕನ್ನಡ ಚಿತ್ರರಂಗದಲ್ಲಿ ಎದೆಗಾರಿಕೆ ನಿರ್ಮಾಪಕರು ಎಂದೇ ಗುರುತಿಸಿಕೊಂಡ ಕೆಲವೇ ಕೆಲವರಲ್ಲಿ ಒಬ್ಬರಾಗಿರುವ ಬಿ.ಕೆ.ಶ್ರೀನಿವಾಸ್ (ಬೆಂ.ಕೋ.ಶ್ರೀ.) ಅವರ ಪುತ್ರ ಹರ್ಷ ಅವರ ವಿವಾಹ ವಿಜೃಂಭಣೆಯಿಂದ ನೆರವೇರಿದೆ.

ಸೋಮವಾರ ಅಂದರೆ ಸೆಪ್ಟೆಂಬರ್ 4ರಂದು ಬೆ.ಕೋ.ಶ್ರೀ. ಪುತ್ರ ಹರ್ಷ (ಅಕ್ಷರ್) ಹಾಗೂ ಉದ್ಯಮಿ ಹೆಚ್.ರಾಜು ಅವರ ಸುಪುತ್ರಿ ಸುಷ್ಮೀತಾ ರಾಜು (ಲೋಕೇಶ್ವರಿ) ಸತಿ ಪತಿಗಳಾದರು.

ಈ ವಿವಾಹ ಮಹೋತ್ಸವದಲ್ಲಿ ರಾಜ ಮಹಾರಾಜರ ಗತ್ತಿನಲ್ಲಿ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದೂ ಸೇರಿದಂತೆ ಸಿರಿತನದ ಹಲವು ವೈವಿಧ್ಯಗಳಿದ್ದವು ಎಂಬುದು ವಿಶೇಷ.

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ
ವಿ ಲೆಗಸಿ ಕನ್ವೆನ್ಷನ್ ಹಾಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಕನ್ನಡ ಚಿತ್ರರಂಗ ,ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.

ಹರ್ಷ ಅವರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *