ನಿರ್ಮಾಪಕ ಶೈಲೇಂದ್ರಬಾಬು ಅವರ ಪುತ್ರ ನಟ ಸುಮಂತ್ ಅವರೀಗ ಹುಟ್ಟುಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಜೊತೆಗೆ ಒಂದು ಚಿತ್ರ ತಂಡವೂ ಸಂಭ್ರಮಿಸುತ್ತಿದೆ..
ಅದು ಚೇಸರ್ ಚಿತ್ರತಂಡ. ಎಂ.ಜೈರಾಮ್ ನಿರ್ದೇಶನದ ಹಾಗೂ ಶಿವಮೊಗ್ಗ ಮೂಲದ ಮಾಲತಿ ಶೇಖರ್ ನಿರ್ಮಾಣದ ಚೇಸರ್ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಸುಮಂತ್ ಶೈಲೇಂದ್ರ..
ಇದೇ ಗುರುವಾರ ಅಂದರೆ ಸೆಪ್ಟೆಂಬರ್ 7ರಂದು ಸುಮಂತ್ ಅವರ ಹುಟ್ಟುಹಬ್ಬದ ಅಂಗವಾಗಿ ಚೇಸರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾಣುತ್ತಿದ್ದು, ಸುಮಂತ್ ಅವರ ಹುಟ್ಟುಹಬ್ಬಕ್ಕೆ ತಂಡ ನೀಡುತ್ತಿರುವ ಉಡುಗೊರೆ ಎಂದು ಚಿತ್ರತಂಡ ತಿಳಿಸಿದೆ.
ನಿಗೂಢತೆ ಮತ್ತು ಸಾಹಸ ಪ್ರಧಾನವಾದ ಈ ಚಿತ್ರಕ್ಕೆ ನಿರ್ದೇಶಕ ಎಂ.ಜೈರಾಮ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.
ಸುಮಂತ್ ಶೈಲೇಂದ್ರ ಜೊತೆ ರಕ್ಷಾ ಮೆನನ್ ನಟಿಸುತ್ತಿದ್ದು, ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚೇಸರ್ ಚಿತ್ರದ ಚಿತ್ರೀಕರಣ ಸದ್ಯವೇ ಮುಗಿಯಲಿದ್ದು, ಚಿತ್ರೀಕರಣದ ನಂತರದ ಕೆಲಸಗಳು ಆರಂಭವಾಗಲಿವೆ ಎಂದು ನಿರ್ದೇಶಕ ಎಂ.ಜೈರಾಮ್ ತಿಳಿಸಿದ್ದಾರೆ.