ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ (ಲಕ್ಷ್ಮಿ ಹಾಗೂ ಗೋವಿಂದರಾಜ್ ಅವರ ಪುತ್ರ) ಷಣ್ಮಖ ನವನವೀನ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.
ಈಗಾಗಲೇ ಅಶೋಕ್ ಕಡಬ ನಿರ್ದೇಶನದ ‘ನಿಂಬಿಯಾ ಬನದ ಮ್ಯಾಗ’ ಚಿತ್ರದಲ್ಲಿ ನಟಿಸಿರುವ ಷಣ್ಮುಖ ಅವರ ಎರಡನೇ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಅದು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ..
ಅದೇ ಚಿನ್ನದ ಮಲ್ಲಿಗೆ ಹೂವೇ..!
ಆರ್ನಾ ಸಾಧ್ಯ ನಿರ್ಮಾಣದ ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನವಿಲುಗರಿ ನವೀನ್ ನಿರ್ದೇಶನ ಮಾಡುತ್ತಿದ್ದಾರೆ.
ಆರ್ನಾ ಸಾಧ್ಯ ಈಗಾಗಲೇ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ ‘ಸಾರಾ ವಜ್ರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಈ ಚಿತ್ರದ ಮೂಲಕ ಆರ್ನಾ ಸಾಧ್ಯ ನಿರ್ಮಾಪಕಿಯಾಗಿದ್ದು, ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯ ಮೂಲಕ ‘ಚಿನ್ನದ ಮಲ್ಲಿಗೆ ಹೂವೇ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈಚೆಗೆ ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಶೀರ್ಷಿಕೆ ಬರೆದುಕೊಟ್ಟರು ಹಾಗೂ ನಟ ರಾಘವೇಂದ್ರ ರಾಜಕುಮಾರ್ ಅದನ್ನು ಅನಾವರಣ ಮಾಡಿದರು.
ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.
ಡಾ.ರಾಜಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಉಳಿದ ಪಾತ್ರಗಳ ಅಯ್ಕೆ ನಡೆಯುತ್ತಿದೆ. ಪ್ರಣವ್ ಸತೀಶ್ ಸಂಗೀತ ಹಾಗೂ ಮಧು ತುಂಬಕೆರೆ ಅವರ ಸಂಕಲನ ಚಿತ್ರಕ್ಕಿದೆ.
ಷಣ್ಮುಖ ಗೋವಿಂದರಾಜ್ ಈಗಾಗಲೇ ‘ನಿಂಬಿಯಾ ಬನದ ಮ್ಯಾಗ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅಶೋಕ್ ಕಡಬ ಇದರ ನಿರ್ದೇಶಕರು. ಮಾದೇಶ್ ನಿರ್ಮಾಣ ಮಾಡಿದ್ದಾರೆ.