ನಟ, ನಿರ್ಮಾಪಕ, ನಿರ್ದೇಶಕ ಎಲ್ಲರೂ ಹೊಸಬರು. ಚಿತ್ರವೂ ಅದ್ದೂರಿಯಾಗಿ ಮೂಡಿಬಂದಿತ್ತು ಮಾತ್ರವಲ್ಲ ಅದೀಗ ಜನಮನ ಗೆದ್ದಿದೆ.
ಅದೇ ಅಗ್ರಸೇನಾ..!
ಚಿತ್ರವು 50 ದಿನಗಳನ್ನು ಪೂರೈಸುವ ಮೂಲಕ ಚಿತ್ರರಸಿಕರನ್ನು ಗೆದ್ದಿರುವ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕೂಡ ತಮ್ಮ ಚಿತ್ರ 50 ದಿನ ಪೂರೈಸಿದ ಸಂಭ್ರಮವನ್ನು ಆಚರಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ವಿರಳವಾಗಿ ಕನ್ನಡದ ಒಂದಷ್ಟು ಚಿತ್ರಗಳು ಯಶಸ್ವೀ ಪ್ರದರ್ಶನ ಕಾಣುತ್ತಿವೆ. ‘ಡೇರ್ ಡೇವಿಲ್ ಮುಸ್ತಾಫ’, ‘ಶ್ರೀಮಂತ’ ಹೀಗೆ ಹಲವು ಚಿತ್ರಗಳು
50ನೇ ದಿನದ ಪ್ರದರ್ಶನದ ಸಂಭ್ರಮವನ್ನು ಹಂಚಿಕೊಂಡಿವೆ.
ಈಗ ಆ ಸಾಲಿಗೆ ‘ಅಗ್ರಸೇನಾ’ ಸೇರಿಕೊಂಡಿದೆ. ವೈಷ್ಣವಿ ಮೂವೀಸ್ ಲಾಂಛನದಲ್ಲಿ ಮಮತಾ ಜಯರಾಮರೆಡ್ಡಿ ನಿರ್ಮಿಸಿರುವ ಈ ಚಿತ್ರದ 50ರ ಸಂಭ್ರಮ ಸಂದರ್ಭದಲ್ಲಿ ನಿರ್ಮಾಪಕ ಜಯರಾಮರೆಡ್ಡಿ, ಮಮತಾ ಜಯರಾಮರೆಡ್ಡಿ ಹಾಗೂ ಮುಖ್ಯ ಪಾತ್ರಧಾರಿ ಅಗಸ್ತ್ಯ ಬೆಳಗೆರೆ, ಮನಮೋಹನ ರೈ, ರಂಜಿತ್, ಶಶಿಧರ ಗೌಡ,ಮೀನಾಕ್ಷಿ ಮೊದಲಾದವರು ಪಾಲ್ಗೊಂಡಿದ್ದರು.
ಇಂತಹ ಸಂಭ್ರಮದ ಕ್ಷಣಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ಎಂದರು ಜಯರಾಮರೆಡ್ಡಿ. ಹೊಸಬರ ಪ್ರಯತ್ನಕ್ಕೆ ಖಂಡಿತಾ ಪ್ರೋತ್ಸಾಹವಿರಲಿ ಎಂಬುದು ಮಮತಾ ಜಯರಾಮರೆಡ್ಡಿ ಅವರ ನುಡಿ.
ಮೂರು ವರ್ಷದ ತಪ್ಪಸ್ಸು ಮಾಡಿದ ಪ್ರತಿಫಲ ಈ ಚಿತ್ರವಾಗಿದೆ ಎಂದವರು ನಟ ಅಗಸ್ತ್ಯ ಬೆಳಗೆರೆ. ಚಿತ್ರದ ಮತ್ತೊಬ್ಬ ನಟ ಅಮರ್ ವಿರಾಜ್ ಹಾಗೂ ನಿರ್ದೇಶಕ ಮುರುಗೇಶ್ ಕಣ್ಣಪ್ಪ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು
ಇದೇ ವೇಳೆ ಚಿತ್ರದಲ್ಲಿ ದುಡಿದ ತಂತ್ರಜ್ಞರು ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು