ಶೀರ್ಷಿಕೆ ವಿಭಿನ್ನ..
‘ಈ ಪಟ್ಟಣಕ್ಕೆ ಏನಾಗಿದೆ..’
ಜಾಹಿರಾತಿನ ಅದೇ ಹೊಗೆ ಮಿಶ್ರಿತ ಶೆಡ್ ನಲ್ಲಿ ಕಾಣುವುದು ಜೂಜು ಬೆಟ್ಟಿಂಗ್ ಮಾಫಿಯಾ..
ಆದರೆ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಈ ಹುಡುಗಿಯರ ಬಟ್ಟೆಗಳಿಗೆ ಏನಾಗಿದೆ ಎಂಬುದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿತ್ತು.
ನಟಿ ರಾಧಿಕಾ ರಾಮ್ ಹಾಗೂ ಪತ್ರಕರ್ತರ ನಡುವೆ ನಟಿಯರ ಉಡುಗೆಯ ವಿಷಯ ಬಿಸಿ ಬಿಸಿ ಚರ್ಚೆಯಾಯಿತು. ತುಂಡುಡುಗೆ ವಿಷಯದಲ್ಲಿ ನಡೆದ ಈ ಚರ್ಚೆ ಸ್ವಾರಸ್ಯಕರವಾಗಿಯೂ ಇತ್ತು.
ಅಂದ ಹಾಗೆ ರವಿ ಸುಬ್ಬರಾವ್, ತಮ್ಮ ಸ್ನೇಹಿತ ರಿತೇಶ್ ಜೋಶಿ ಸೇರಿ ನಿರ್ಮಿಸಿರುವ ಹಾಗೂ ರವಿ ಸುಬ್ಬರಾವ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ.
ನಿಜ ಜೀವನದ ಘಟನೆಗಳೇ ಈ ಚಿತ್ರದ ಕಥೆಗೆ ಸ್ಫೂರ್ತಿ. ಜೂಜು ಮತ್ತು ಬೆಟ್ಟಿಂಗ್ ಮಾಫಿಯಾ ಸುತ್ತ ನಡೆಯುವ ಕಥೆ ವಿಭಿನ್ನ ಎಂದು ಹೇಳಿಕೊಂಡರು ರವಿ ಸುಬ್ಬರಾವ್.
ಈಗಿನ ಕಾಲದಲ್ಲಿ ಯುವ ಜನರು ಹಲವು ಚಟಗಳಿಗೆ ಬಲಿಯಾಗುತ್ತಾರೆ. ಅವರ ವರ್ತನೆ ಮನೆ ಮತ್ತು ಹೊರಗೆ ಬೇರೆ ಬೇರೆಯಾಗಿರುತ್ತದೆ. ಅಂತಹ ಯುವಕ ಇಲ್ಲಿನ ನಾಯಕ.
ನೈಜ ಚಿತ್ರಣಕ್ಕೆ ಕರ್ನಾಟಕದಲ್ಲಿ ಒಪ್ಪಿಗೆಯಾಗದ ಕಾರಣ ಚಿತ್ರದ ಸೆನ್ಸಾರ್ ಹೈದರಾಬಾದ್ ನಲ್ಲಿ ಆಯಿತಂತೆ. ಅಲ್ಲಿ ಚಿತ್ರಕ್ಕೆ ಸಿಕ್ಕಿರುವುದು ಎ ಪ್ರಮಾಣ ಪತ್ರ ಎಂಬ ಮಾಹಿತಿ ಕೊಟ್ಟರು ನಿರ್ದೇಶಕರು.
ಸಂಗೀತ ನಿರ್ದೇಶಕ ಅನಿಲ್ ಸಿ.ಜೆ
ಮತ್ತೊಬ್ಬ ನಿರ್ಮಾಪಕ ರಿತೇಶ್ ಜೋಶಿ, ನಟ ಸತೀಶ್ ಶೆಟ್ಟಿ ಹಾಗೂ ವಿತರಕ ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.