ಚಿತ್ರದ ‘ಡೆವಿಡ್’. ಇದೇ ವಾರ ಅಂದರೆ ಜುಲೈ 21ರಂದು ಬಿಡುಗಡೆ ಕಾಣಲಿದೆ. ಶ್ರೇಯಸ್ ಚಿಂಗಾ ಈ ಚಿತ್ರದ ನಿರ್ದೇಶಕ ಮತ್ತು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಶಾಸಕ ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹ ಮತ್ತು ಧನರಾಜ ಬಾಬು ಜಿ ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ.
ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಧನರಾಜ್ ಬಾಬು ಶ್ರೇಯಸ್ ನೇತೃತ್ವದ ಚಿತ್ರತಂಡಕ್ಕೆ ಸಹಾಯ ಹಸ್ತ ಚಾಚಿದ್ದರಿಂದ ಈ ಚಿತ್ರ ನಿರ್ಮಾಣವಾಗಲು ಕಾರಣವಾಯಿತು ಎಂಬುದು ನಿರ್ದೇಶಕರ ವಿವರಣೆ.
ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಅತ್ಯುತ್ಸಾಹದಿಂದ ಪಾಲ್ಗೊಂಡು ಮಾತನಾಡಿದರು.
‘ಡೇವಿಡ್’ ರೊಮ್ಯಾಂಟಿಕ್ ಮರ್ಡರ್ ಮಿಸ್ಟರಿ ಕಥಾ ಹಂದರ ಹೊಂದಿರುವ ಚಿತ್ರ. ಬೆಂಗಳೂರನ್ನು ವಿಶೇಷವಾಗಿ ತೋರಿಸಲಾಗುತ್ತದೆ ಎಂಬುದು ನಟ ಕಮ್ ನಿರ್ದೇಶಕ ಶ್ರೇಯಸ್ ಚಿಂಗಾ ವಿವರಣೆ.
ಚಿತ್ರವನ್ನು ನಿರ್ದೇಶನ ಮಾಡುವಲ್ಲಿ ಭಾರ್ಗವ ಅವರ ಬೆಂಬಲವಿದೆ. ಇದೇ ವಾರ (ಜುಲೈ 21) ಚಿತ್ರವು ಬಿಡುಗಡೆ ಕಾಣುತ್ತಿದೆ ಎಂದರು.
ಶ್ರೇಯಸ್ ಎದುರು ಸಾರಾ ಹರೀಶ್ ನಟಿಸಿದ್ದು, ಇದು ಅವರಿಗೆ ಎರಡನೇ ಚಿತ್ರವಾಗಿದೆ ಎಂಬ ಮಾಹಿತಿ ಬಂತು.
ಪ್ರತಾಪ್ ನಾರಾಯಣ್ ಶ್ರೀಮಂತರ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕ ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ನಟ ಮೋಹಿತ್ ವಾಸ್ವನಿ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದರು.
ರಾಕೇಶ್ ಅಡಿಗ, ಪ್ರತಾಪ್ ನಾರಾಯಣ್, ಸಾರಾ ಹರೀಶ್, ಅವಿನಾಶ್ ಯಳಂದೂರು, ಬುಲೆಟ್ ಪ್ರಕಾಶ್, ಕಾವ್ಯಾ ಶಾ, ನಂದೀಶ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಅಂದ ಹಾಗೆ ‘ಡೇವಿಡ್’ ಬುಲೆಟ್ ಪ್ರಕಾಶ್ ನಟಸಿರುವ ಕೊನೆಯ ಚಿತ್ರ.