ಮಮತಾ ಜಯರಾಮರೆಡ್ಡಿ ನಿರ್ಮಾಣದ ‘ಅಗ್ರಸೇನಾ’ ಬಿಡುಗಡೆಗೆ ಸಜ್ಜುಗೊಂಡಿದ್ದು, ಜೂ.23 ರಂದು
ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ..
ಹಾಗೆಂದು ವಿವರ ನೀಡಿತು ಚಿತ್ರತಂಡ. ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ. ಕಥೆ ಉತ್ತಮವಾಗಿದೆ. ಈಗ ನಮಗೆ ಪ್ರಚಾರ ಮಾಡುವುದೇ ದೊಡ್ಡ ಸವಾಲು ಎಂದರು ನಿರ್ಮಾಪಕ ಜಯರಾಮರೆಡ್ಡಿ.
ಚಿತ್ರ ನಿರ್ಮಾಣದ ವಿಷಯದಲ್ಲಿ ಯಾವ ಕೊರತೆಯನ್ನು ಮಾಡಲಾಗಿಲ್ಲ; ಚಿತ್ರ ಅತ್ಯುತ್ತಮ ವಾಗಿ ಮೂಡಿ ಬರಬೇಕೆಂಬ ಆಶಯದಿಂದ ಸ್ವಲ್ಪ ದಿನಗಳು ಕಳೆದಿವೆ. ಹಾಗಾಗಿ ತಡವಾಗಿದೆ ಅಷ್ಟೇ ಎಂದರು.
ಇದೊಂದು ಕುಟುಂಬ ನೋಡುವ ಚಿತ್ರ. ಎಲ್ಲರಿಗೂ ಇಷ್ಟವಾಗುವ ಕಥೆಯನ್ನು ಒಳಗೊಂಡಿದೆ ಎಂದವರು ನಿರ್ದೇಶಜ ಮುರುಗೇಶ್ ಕಣ್ಣಪ್ಪ.
ಇದು ಹಿರಿಯ ನಟ ರಾಮಕೃಷ್ಣ ಅವರ 200 ನೇ ಸಿನಿಮಾ. ಅಲ್ಲದೆ ಅವರು ದ್ವಿಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದ ಬಗ್ಗೆ ಬಹಳವೇ ಸಂತಸ ವ್ಯಕ್ತಪಡಿಸಿದರು ಎಂಬ ವಿವರ ನೀಡಿದರು ನಿರ್ದೇಶಕರು.
ಚಿತ್ರದ ಕಥೆ ವಿಭಿನ್ನ; ಆಶಯಗಳು ಅತ್ಯುತ್ತಮ. ಹಾಗಾಗಿ ನಮಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಚಿತ್ರವು ಮುಂದಿನ ತಿಂಗಳು ಬಿಡುಗಡೆ ಕಾಣುತ್ತಿದೆ ಎಂದರು.
ಚಿತ್ರಕ್ಕೆ ತ್ಯಾಗರಾಜ್ ಎಂ.ಎಸ್
ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ಚಿತ್ರ ನನ್ನ ವೃತ್ತಿ ಬದುಕಿಗೊಂದು ರಹದಾರಿ ಹಾಕಿಕೊಡುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು ಸಂಗೀತ ನಿರ್ದೇಶಕರು.
ಅಮರ್ ವಿ.ರಾಜ್ ಮುಖ್ಯಪಾತ್ರದಲ್ಲಿದ್ದು,
ತಾಂತ್ರಿಕ ವರ್ಗ ಕಷ್ಟಪಟ್ಟಿದೆ. ನನ್ನದು
ಲವ್ವರ್ ಬಾಯ್ ಪಾತ್ರ ಎಂದರು.
ಮತ್ತೊಂದು ಮುಖ್ಯ ಪಾತ್ರವನ್ನು ಅಗಸ್ತ್ಯ ಬಳಗೆರೆ ನಿರ್ವಹಿಸಿದ್ದಾರೆ.
ಈ ಪಾತ್ರ ಆದಿಶೇಷ ಅಂತಾ.. ಹಿರಿಯ ನಟ ರಾಮಕೃಷ್ಣ ಮಗನ ಪಾತ್ರ.
ಹಳ್ಳಿ ಜನರು ಪಟ್ಟಣ್ಣಕ್ಕೆ ಹೋಗಬಾರದು ಎಂಬ ಧೋರಣೆಯಲ್ಲಿ ಗ್ರಾಮೀಣ ಜನರನ್ನು ರಕ್ಷಣೆ ಮಾಡುವ ಪಾತ್ರ ನನ್ನದು ಎಂದರು.
ರಚನಾ ದಶರಥ್ ಮುಖ್ಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ನನ್ನ ವೃತ್ತಿ ಬದುಕಿನಲ್ಲಿ ಬಹಳವೇ ನಿರೀಕ್ಷೆ ಇಟ್ಟುಕೊಂಡಿರುವ ಪಾತ್ರವಿದು.
ರಿಶಿಕಾ ಎಂಬ ಆ ಪಾತ್ರ ಪ್ರೇಕ್ಷಕನಿಗೆ ಬಹಳವೇ ಆಪ್ತವೆನಿಸುತ್ತದೆ ಎಂದರು.
ನಟಿ ಭಾರತಿ ಹೆಗಡೆ ಆದಿಶೇಷ ಪಾತ್ರದ ಪತ್ನಿ ಪಾತ್ರ ನಿರ್ವಹಿಸಿರುವೆ ಎಂಬ ವಿವರ ನೀಡಿದರು.
ಖಳ ನಾಯಕನ ಪಾತ್ರ ನಿರ್ವಹಿಸಿರುವ ಶಶಿಧರ್, ತಮಾಷೆಯ ಪಾತ್ರ ಮಾಡಿರುವ ರಂಜಿತ್ ತಮ್ಮ ಅನುಭವಗಳನ್ನು ಹೇಳಿಕೊಂಡರು.