Snehapriya.com

June 6, 2025

ಪತ್ರಕರ್ತನ ಸಾಹಸಗಾಥೆ ದಿಗ್ವಿಜಯ..

Social Share :

ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಹಾಗೂ ಸೀಯು, ಫ್ಲಾಪ್ ಡೈರೆಕ್ಟರ್, ಕರ್ತ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ದುರ್ಗಾ ಪಿ.ಎಸ್. ಅವರ ನಿರ್ದೇಶನದ ಮತ್ತೊಂದು ಚಿತ್ರ ದಿಗ್ವಿಜಯ.

ಒಬ್ಬ ಪತ್ರಕರ್ತ ಮನಸು ಮಾಡಿದ್ರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ ಬಗೆಹರಿಸಬಹುದು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಪತ್ರಕರ್ತ ಹುಚ್ಚನಂತಹ ವ್ಯಕ್ತಿ ಇಟ್ಟುಕೊಂಡು ಕೇವಲ ಮೂರು ದಿನದಲ್ಲಿ ರಾಜ್ಯದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಿಸುತ್ತಾನೆ. ಅದು ಹೇಗೆ ಎನ್ನುವುದೇ ಈ ಚಿತ್ರದ ಕಥೆ.

ಮುಖ್ಯ ಪಾತ್ರಧಾರಿಯ ತಂದೆ ತಾಯಿ ಕೂಡ ರೈತರೇ ಆಗಿದ್ದು, ಅವರೂ ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್ ನಿಂದ ಗೆಳೆಯನೊಬ್ಬ ಹುಚ್ಚನಾಗಿರುತ್ತಾನೆ. ಆತನ ಜೊತೆ ಸೇರಿ ಜನರಿಗೆ ನ್ಯಾಯ ಕೊಡಿಸುವ ಹಾದಿ ಚಿತ್ರದಲ್ಲಿದೆ.

ಜೆ.ಪಿ. ಎಂಟರ್ ಟೈನ್ ಮೆಂಟ್ ನಿರ್ಮಾಣದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದ ಯು ಪ್ರಮಾಣಪತ್ರ ದೊರೆತಿದೆ.

ಇದೇ ಜೂನ್ ನಲ್ಲಿ ಬಿಡುಗಡೆ ಯಾಗಲಿರುವ ಈ ಚಿತ್ರವನ್ನು ಜಯಪ್ರಭು ಆರ್ ಲಿಂಗಾಯತ್. ಅರುಣ್ ಸುಕದರ್. ಹರೀಶ್ ಆರ್ ಸಿ. ಸೇರಿ ನಿರ್ಮಾಣ ಮಾಡಿದ್ದಾರೆ. ಕಥೆ- ಚಿತ್ರಕಥೆ-ಸಂಭಾಷಣೆ -ಸಾಹಿತ್ಯ – ಸಂಕಲನ ಮತ್ತು ನಿರ್ದೇಶನ ದುರ್ಗಾ ಪಿ. ಎಸ್. ಅವರದು.


ಜಯಪ್ರಭು ಆರ್. ಲಿಂಗಾಯತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಸ್ನೇಹ ಅವರ ಜೊತೆ ಪಾತ್ರ ನಿರ್ವಹಿಸಿದ್ದಾರೆ.

ಸುಚೇಂದ್ರ ಪ್ರಸಾದ್. ಪಟ್ರೆ ನಾಗರಾಜ್. ಹೊನ್ನವಳ್ಳಿ ಕೃಷ್ಣ. ಹೊನ್ನವಳ್ಳಿ ಶ್ರೀಕಾಂತ್. ಕಿಲ್ಲರ್ ವೆಂಕಟೇಶ್. ಶಿವಕುಮಾರ್ ಆರಾಧ್ಯ. ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.

ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹರ್ಷ ಸಂಗೀತ ನೀಡಿದ್ದು, ಛಾಯಾಗ್ರಹಣ ವಿನಸ್ ಮೂರ್ತಿ ಅವರದು. ಸೂಪ್ಪರ್ ಸುಬ್ಬು ಸಾಹಸ, ಜಗ್ಗು ಮಾಸ್ಟರ್ ನೃತ್ಯವಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *