ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿರುವ ‘ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಮೈಸೂರು ರಾಜ ವಶಸ್ಥರಾದ ಮಹಾರಾಜ ಯದುವೀರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ‘ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಇತ್ತೀಚೆಗೆ ಮೈಸೂರು ರಾಜ ವಂಶಸ್ಥ ಮಹಾರಾಜ ಯದುವೀರ್ ಒಡೆಯರ್ ವೀಕ್ಷೀಸಿದರು.
ರಮೇಶ್ ಅರವಿಂದ್ ಹಾಗೂ ಚಿತ್ರತಂಡದ ಇತರರು ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪತ್ತೆಧಾರಿ ಸಿನಿಮಾಗಳು ಬಹಳ ಇಷ್ಟ. ಈ ದಿಶೆಯಲ್ಲಿ ‘ಶಿವಾಜಿ ಸುರತ್ಕಲ್ 2’ ಉತ್ತಮ ಚಿತ್ರವಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ ಎಂದು ಮಹಾರಾಜರು ಮನತುಂಬಿ ಹಾರೈಸಿದರು.
ಈಗಾಗಲೇ ಜನ ಮನ ಸೂರೆಗೊಂಡಿರುವ ಈ ಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿ 41 ದಿನಗಳನ್ನು ಪೂರೈಸಿ, 50ನೇ ದಿನದತ್ತ ಮುನ್ನುಗ್ಗುತ್ತಿದೆ.