Snehapriya.com

June 8, 2025

ವಾಮಾಚಾರದ ಸುತ್ತ ಗದಾಯುದ್ಧ

Social Share :

ಇದು ಸತ್ಯ ಘಟನೆಗಳನ್ನು ಆಧರಿಸಿ ಮಾಡಿರುವ ಚಿತ್ರ. ಚಿತ್ರದ ಸಲುವಾಗಿ ಅನೇಕ ಹುಡುಕಾಟಗಳನ್ನು ನಡೆಸಿ ಸಂಶೋಧನೆ ಮಾಡಲಾಗಿದೆ.

ಹಾಗೆಂದು ಹೇಳಿಕೊಂಡಿತು ಚಿತ್ರತಂಡ. ಮುಖ್ಯವಾಗಿ ಚಿತ್ರದ ನಿರ್ದೇಶಕ ಶ್ರೀವತ್ಸರಾವ್ ವಾಮಾಚಾರದ ಹಿನ್ನೆಲೆಯಲ್ಲಿ ನಿಜ ತಿಳಿಯಲು ಸಾಕಷ್ಟು ಹುಡುಕಾಟ ನಡೆಸಲಾಯಿತು ಎಂದರು.

ಚಿತ್ರ ಕೊರೊನಾಗೆ ಮುಂಚೆ ಆರಂಭಗೊಂಡಿತು. ಹಾಗಾಗಿ ಈ ಚಿತ್ರದಲ್ಲಿ ಸತ್ಯಜಿತ್, ಶಿವರಾಮಣ್ಣ ಹಾಗೂ ಇನ್ನಿತರ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ. ಸಾಕಷ್ಟು ತಡವಾದರೂ ಚಿತ್ರದ ಆಶಯಗಳಿಗೆ ಯಾವ ಕೊರತೆಯೂ ಆಗಿಲ್ಲ; ಚಿತ್ರವು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು ನಿರ್ದೇಶಕರು.

ನಿತಿನ್ ಶಿರ್ ಗುರ್ ಕರ್ ಚಿತ್ರದ ನಿರ್ಮಾಪಕರು. ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ನಡೆಯುವ ಮಾಟ ಮಂತ್ರ ಮತ್ತು ಪೂಜೆಯ ಬಗ್ಗೆ ಅಧ್ಯಯನವನ್ನೇ ನಡೆಸಲಾಯಿತು ಎಂದರು.

ನಿರ್ಮಾಪಕರ ಪುತ್ರ ಸುಮಿತ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ನಾನು ಕ್ರೀಡಾಪಟುವಾಗಿದ್ದೆ. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯ ಆಡುವಾಗ ಬಿದ್ದು ಪೆಟ್ಟಾಯಿತು. ಮುಂದೆ ಆಟ ಆಡುವುದು ಕಷ್ಟವೆನಿಸಿದಾಗ ಈ ನಟನೆಯ ಕ್ಷೇತ್ರವನ್ನು ಆಯ್ದುಕೊಂಡೆ ಎಂದರು ಸುಮಿತ್.

ರೇಖಾ ಸ್ಪರ್ಶ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ವಾಮಾಚಾರ ನನ್ನ ಮೇಲೆ ನಡೆಯುವ ಪಾತ್ರ ಅದು. ಆಗಿನಿಂದ ಕೊಂಚ ಹೆದರಿಕೊಂಡಿದ್ದೆ. ಕಾಲಿಗೆ ಕಟ್ಟಿಕೊಂಡಿದ್ದ ಕಪ್ಪುದಾರ ಹಾಗೆಯೇ ಇದೆ ಎಂದರು ಸ್ಪರ್ಶಾ ರೇಖಾ.

ಮತ್ತು ಈ ಚಿತ್ರ ಮಾಡಿ ಮೂರು ವರ್ಷವಾಗಿತ್ತು; ಹಾಗಾಗಿ ಎಲ್ಲವೂ ಮರೆತು ಹೋಗಿತ್ತು ಎಂದರು.

ಸಂಗೀತ ನಿರ್ದೇಶಕ ಶೆಡ್ ರಾಜ್ ಸಾಲೋಮನ್ (ವೈಸ್ ಕಿಂಗ್ ) ಹಾಗೂ ನಟಿ ಧನ್ಯಾ ತಮ್ಮ ಅನುಭವಗಳನ್ನು ಹೇಳಿಕೊಂಡರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *