ಒಂದೇ ಚಿತ್ರ.. ಐದು ಕಥೆ.. ಐವರು ನಿರ್ದೇಶಕರು.. ನಿರೂಪಣೆಯಲ್ಲಿ ವೈವಿಧ್ಯತೆ..ಕಥೆಯಲ್ಲಿ ಏಕತೆ..
ಇದು ಇದೇ ವಾರ ಅಂದರೆ ಏಪ್ರಿಲ್ 7ರಂದು ಬಿಡುಗಡೆ ಕಾಣುತ್ತಿರುವ ಗುರುದೇಶ್ ಪಾಂಡೆ ನೇತೃತ್ವದ ‘ಪೆಂಟಗನ್’ ಚಿತ್ರದ ವಿಶೇಷತೆಗಳು..
ಸಾವಿನ ನೆನಕೆಗಳ ವಿವಿಧ ರೂಪಗಳು ಇಲ್ಲಿ ಗೋಚರ. ಸಾವು ಎಷ್ಟು ಭಯಂಕರ ಎಂಬ ನಿರೂಪಣೆಯನ್ನು ಒಂದೇ ಗೀತೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಅದೇ ಚಿತ್ರದ ಥೀಮ್ ಸಾಂಗ್..
ಹೌದು ಥೀಮ್ ಸಾಂಗ್ ಕೇಳಿದವರು ಒಂದು ಕ್ಷಣ ಒಳಗೆ ನಡುಗಬೇಕು. ಹಾಗಿತ್ತು ಅದರ ಕದರ್. ಮಣಿಕಾಂತ್ ಕದ್ರಿ ಸಂಗೀತದಲ್ಲಿ ಮೂಡಿ ಬಂದಿರುವ ಥೀಮ್ ಸಾಂಗ್ ಬರೆದವರು ಐವರು ನಿರ್ದೇಶಕರ ಪೈಕಿ ಒಬ್ಬರಾಗಿರುವ ರಘು ಶಿವಮೊಗ್ಗ. ಅವರೂ ಸೇರಿದಂತೆ ಕಿರಣ್ ಕುಮಾರ್, ಚಂದ್ರಮೋಹನ್, ಆಕಾಶ್ ಶ್ರೀವತ್ಸ ಮತ್ತು ಗುರುದೇಶ್ ಪಾಂಡೆ ಈ ಐವರು ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ವಿಶೇಷವಾಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪಾತ್ರ ವರ್ಗದಲ್ಲಿರುವ ತನಿಷಾ ಕುಪಂಡ, ಅನೂಷಾ ಪ್ರೀತಿಕ ದೇಶಪಾಂಡೆ ಹಾಗೂ ಸೋನಿ ಶೆಟ್ಟಿ ಪಾತ್ರದ ಬಗ್ಗೆ ವಿವರ ನೀಡಿದರು.
ಥೀಮ್ ಸಾಂಗ್ ಮೊದಲು ಹುಟ್ಟಿದ್ದು ಎಂದರು ಕಿರಣ್ ಕುಮಾರ್, ಡಾರ್ಕ್ ಕಾಮಿಡಿ ಸಾಂದರ್ಭಿಕ ನಾಟಕ ನಮ್ಮ ಕಥೆ ಎಂದರು ಚಂದ್ರಮೋಹನ್,
ರಘು ಶಿವಮೊಗ್ಗ ಸಿನಿಮಾದಲ್ಲಿ ಆರು ಹಾಡುಗಳ ಪೈಕಿ ಮೂರು ಹಾಡನ್ನು ಬರೆದಿದ್ದಾರೆ ಎಂಬ ವಿವರ ಬಂದವು.
ಪ್ರಮೋಷನಲ್ ಥೀಮ್ ಸಾಂಗ್
ಸಾಹಿತ್ಯ ನೀವೇ ಬರೆಯಿರಿ ಅಂದರು
ಮೂರು ಹಾಡು ಬರೆದಿರುವೆ ಎಂದರು ರಘು ಶಿವಮೊಗ್ಗ.
ಒಂದು ಎಮೋಷನಲ್ ಸಿನಿಮಾ. ಅದು ನಿಜ ಜೀವನದಲ್ಲಿ ನಡೆದಿರುವುದೇ ಇರಬಹುದು. ಅದನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಉತ್ಸಾಹವಿತ್ತು. ಅದು ನೆರವೇರಿದೆ ಎಂಬ ಭಾವನೆ ನನ್ನದು ಎಂದರು ಗುರುದೇಶ್ ಪಾಂಡೆ.
ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಗಾಯಕರಾದ ಸಂತೋಷ್ ವೆಂಕಿ ಹಾಗೂ ಸಂಗೀತ ಕಟ್ಟಿ ಹಾಜರಿದ್ದರು.