Snehapriya.com

June 8, 2025

ವಜ್ರಮುನಿ ಸ್ಮರಣೆಯ ಯಲಾಕುನ್ನಿ ಪ್ರಥಮ ಬಾರಿಗೆ ಕೋಮಲ್ ದ್ವಿಪಾತ್ರ

Social Share :

ಕನ್ನಡದ ಸೆನ್ಸೆಷನಲ್ ಸ್ಟಾರ್ ಎಂದೇ ಹೆಸರಾಗಿರುವ ಬಹುಮುಖ ಪ್ರತಿಭೆಯ ನಟ ಕೋಮಲ್ ಕುಮಾರ್ ಇದೇ ಪ್ರಥಮ ಬಾರಿಗೆ ದ್ವೀಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅದೇ ಯಲಾಕುನ್ನಿ..!

ಕೋಮಲ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಹಿರಿಯ ಖಳನಟ ವಜ್ರಮುನಿ ಅವರ ಖದರ್ ಕಾಣಲಿದೆ. ಅದು ಹಾಸ್ಯ ಸನ್ನಿವೇಶವೂ ಇರಬಹುದು.. ವಜ್ರಮುನಿ ಇಡೀ ಚಿತ್ರವನ್ನು ಆವರಿಸಲಿದ್ದಾರೆ..

ಬೆಂಗಳೂರಿನ ಚಂದ್ರಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಾಲಯ ಆವರಣದಲ್ಲಿ ಸೋಮವಾರ ಮುಹೂರ್ತ ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ವಿವರ ನೀಡಿತು ಚಿತ್ರತಂಡ.

ಒಂದು ಒಳ್ಳೆಯ ಮತ್ತು ಇನ್ನೊಂದು ಖಳನ ಗೆಟ್ ಅಪ್ ನಲ್ಲಿ ಕೋಮಲ್ ಕುಮಾರ್ ಕಾಣಿಸಿಕೊಳ್ಳಲಿದ್ದು, ಹಾಸ್ಯದ ಮೊನಚು ಇಲ್ಲಿಯೂ ಇರುತ್ತದೆ. ಹಾಗಾಗಿ ಇದು ಸಂಪೂರ್ಣ ಮನರಂಜನಾತ್ಮಕ ಚಿತ್ರವೆಂಬ ಮಾಹಿತಿಗಳನ್ನು ನೀಡಿತು ಚಿತ್ರತಂಡ.

ಯಲಾಕುನ್ನಿ.. ಎಂಬುದು ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ವಜ್ರಮುನಿ ಅವರು ಹೇಳುವ ಸಂಭಾಷಣೆ. ಈ ಸಂಭಾಷಣೆಯಂತೆ ಚಿತ್ರದ ಮ್ಯಾನರಿಜಂ ಇರುತ್ತದೆ. ಜೊತೆಗೆ ಹಾಸ್ಯದ ಮೊನಚೂ ಇರುತ್ತದೆ ಎಂಬ ವಿವರ ಬಂತು ತಂಡದಿಂದ.

ವಜ್ರಮುನಿ ಅವರು ಚಿತ್ರದಲ್ಲಿ ಕಾಣಿಸುತ್ತಾರೆ. ಆದರೆ ಯಾವ ರೂಪದಲ್ಲಿ ಎಂಬುದು ನಿಗೂಢ. ಏಕೆಂದರೆ ಇದು ಯಾವುದೇ ಪಾತ್ರದ ಮರುಸೃಷ್ಟಿ ಅಲ್ಲ; ಬದಲಿಗೆ ಹೊಸ ಕಲ್ಪನೆಯಲ್ಲಿ ಮೂಡಿ ಬಂದಿರುವ ಪಾತ್ರ ಎಂದರು ಕೋಮಲ್ ಕುಮಾರ್.

ಶ್ರೀರಂಗಪಟ್ಟಣದ ಸಮೀಪ ಪಾಳು ಬಿದ್ದಂತೆ ಇರುವ ದೇವಾಲಯದ ಬಳಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯುತ್ತದೆ ಎಂದರು.

ಮಹೇಶ್ ಗೌಡ್ರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಮ್ಮ ಊರಿನ ಸಮೀಪವೇ ಚಿತ್ರೀಕರಣ ನಡೆಯಲಿದೆ ಎಂಬ ವಿವರ ಕೊಟ್ಟರು.

ವಜ್ರಮುನಿ ಅವರು ಮನೆಯಲ್ಲಿ ಸಾಧುವಾಗಿದ್ದರು. ಅವರ ಪಾತ್ರಗಳು ಮಾತ್ರ ಭಯಂಕರವಾಗಿರುತ್ತಿದ್ದವು ಎಂದವರು ದಿವಂಗತ ವಜ್ರಮುನಿ ಅವರ ಪತ್ನಿ ಲಕ್ಷ್ಮಿ ವಜ್ರಮುನಿ. ಈ ಚಿತ್ರದಲ್ಲಿ ಅವರ ಮೊಮ್ಮಗ ಪಾತ್ರ ಮಾಡುತ್ತಿರುವುದು ವಿಶೇಷ. ಏಕೆಂದರೆ ವಜ್ರಮುನಿ ಅವರ ಮಕ್ಕಳು ಯಾರೂ ಕೂಡ ಸಿನಿಮಾ ರಂಗದತ್ತ ಸುಳಿದು ನೋಡಿಲ್ಲ ಎಂದರು.

ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಸಂಜಯ್ ವಜ್ರು ಈ ಮುಂಚೆ ಧಾರಾವಾಹಿಗಳಲ್ಲಿ ನಟಿಸಿದ್ದು, ಇದೇ ಪ್ರಥಮ ಬಾರಿಗೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.

ಎಲ್ಲಾ ಸಿನಿ ಪ್ರಿಯರಿಗೆ ಈ ಕಥೆ ಇಷ್ಟವಾಗುತ್ತದೆ ಎಂದರು ನಿರ್ದೇಶಕ ಎನ್.ಆರ್‌.ಪ್ರದೀಪ. ಹಲವಾರು ಚಿತ್ರಗಳಲ್ಲಿ ಸಹಾಯಕರಾಗಿ ದುಡಿದು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಕೋಮಲ್ ಸರ್ ಅವರಿಗೆ ಕಥೆ ಒಪ್ಪಿಸುವುದು ಸುಲಭವಾದ ವಿಷಯವಲ್ಲ; ನನ್ನ ಪುಣ್ಯ ಈ ಕಥೆ ಒಪ್ಪಿರುವುದು ಎಂದರು ನಿರ್ದೇಶಕರು.

ನನಗೆ ಚಿತ್ರದಲ್ಲಿ ಮಹತ್ವದ ಪಾತ್ರವಿದೆ ಎಂದರು ಯತಿರಾಜ್ ಜಗ್ಗೇಶ್. ನನ್ನ ಪಾತ್ರಕ್ಕೆ ಗಢವ ಎಂದು ಹೆಸರಿಟ್ಟಿದ್ದಾರೆ ಎಂದು ಚಟಾಕಿ ಹಾರಿಸಿದರು.

ಖ್ಯಾತ ಹಾಸ್ಯ ನಟ ಮುಸುರಿ ಕೃಷ್ಣಮೂರ್ತಿ ಅವರ ಪಾತ್ರವೂ ಈ ಚಿತ್ರದಲ್ಲಿದ್ದು, ಅವರ ಪುತ್ರ ಜಯಸಿಂಹ ಮುಸುರಿ ‘ಕನೆಕ್ಷನ್ ಕಾಳಪ್ಪ’ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಚಿತ್ರಕ್ಕೆ ಶುಭ ಹಾರೈಸಿದರು. ನಟ ಮಹಂತೇಶ್, ಛಾಯಾಗ್ರಾಹಕ ಉದಯಲೀಲ, ನಟಿ ನಿಸರ್ಗ ಅಪ್ಪಣ್ಣ ಮಾತನಾಡಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *