ಯುಗಾದಿಯ ಸಂದರ್ಭದಲ್ಲಿ ಪ್ರೇಕ್ಷಕರ ಸಂಖ್ಯೆಯನ್ಬು ಹೆಚ್ಚಿಕೊಂಡಿರುವ ‘ಕಬ್ಜ’ ಚಿತ್ರವು ಫ್ಯಾಮಿಲಿ ಆಡಿಯನ್ಸ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಯೆಲ್ಲಾ ಸಿನಿಮಾ ನೋಡಲು ಆಗಮಿಸಿದ್ದು ವಿಶೇಷವಾಗಿತ್ತು. ಯಾರು ಏನೇ ಅಂದರು ಚಿತ್ರಮಂದಿರಗಳ ಮುಂದೆ ಪ್ರೇಕ್ಷಕನ ಹವಾ ಇದ್ದೇ ಇತ್ತು.
ಕಬ್ಜ ಚಿತ್ರವು ಈಗಾಗಲೇ ಯಶಸ್ಸನ್ನು ಪಡೆದುಕೊಂಡಿದ್ದು, ಗಳಿಕೆಯಲ್ಲಿ ಮಹತ್ವದ ಸಾಧನೆ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಚಿತ್ರವು ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿಕೊಂಡಿದ್ದು, ಯುಗಾದಿಯ ದಿನದ ಬಳಿಕ ಅದರ ಗಳಿಕೆ ಸುಮಾರು 250 ಕೋಟಿ ಎಂದು ಹೇಳಲಾಗಿದೆ.
ಚಿತ್ರದ ಅದ್ಭುತ ಮೇಕಿಂಗ್ ಹಾಗೂ ನಮಾಮಿ ಹಾಡಿನ ವೈಶಿಷ್ಟ್ಯ ಕುಟುಂಬ ಪ್ರೇಕ್ಷಕರು ಚಿತ್ರವನ್ನು ಮೆಚ್ಚುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ .
‘ಕಬ್ಜ’ ಯಶಸ್ಸಿನ ಗಳಿಗೆಯಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಕಣ್ಣೀರು ಹಾಕಿದ್ದರು. ಇದರಲ್ಲಿ ಗೆಲುವಿನ ಸಂತಸದ ಬುಗ್ಗೆಯಿತ್ತು. ಜೊತೆಗೆ ಕಾಲೆಳೆಯುತ್ತಿರುವವರ ಬಗ್ಗೆ ಆಕ್ರೋಶವಿತ್ತು. ಯಾರು ಏನೇ ಮಾಡಿದರು ನಾನು ಅಸಹಾಯಕತೆಗೆ ಜಾರುವುದಿಲ್ಲ ಎಂಬ ಅರ್ಥದಲ್ಲೇ ಮಾತನಾಡಿದ್ದರು.
ಕನ್ನಡದ ಚಿತ್ರಗಳು ಹೇಗೆ ಎಂಬುದಕ್ಕೆ ಇತ್ತೀಚೆಗೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆದಿರುವೆ..
ಎಂದು ಹೇಳುವಾಗ ನಿರ್ದೇಶಕ ಆರ್.ಚಂದ್ರು ಅತ್ಯಂತ ಭಾವುಕರಾಗಿದ್ದರು.
ಒಂದು ಚಿತ್ರ ಅದರಲ್ಲೂ ದೊಡ್ಡ ಕನಸುಗಳ ಜೊತೆ ಪ್ರಯಾಣ ಮಾಡುವ ಮತ್ತು ಕಂಡ ಕನಸು ನನಸು ಮಾಡುವ ಪ್ರಯತ್ನದಲ್ಲಿ ರಕ್ತವೇ ಬಸಿದು ಹೋಗಿರುತ್ತದೆ. ಗೆಲ್ಲಬೇಕು ಎಂಬ ಹಠ ಅದನ್ನೇಲ್ಲಾ ಸಹಿಸಿಕೊಳ್ಳುತ್ತದೆ. ಆದರೆ ಇಂತಹ ಪ್ರಯತ್ನವನ್ನೇ ಗುರುತಿಸದೇ ಹೋದರೆ ಹೃದಯ ಏನಾಗಬೇಕು.. ಅದೃಷ್ಟವಶಾತ್ ಇಲ್ಲಿ ನಾವು ಗೆದ್ದಿದ್ದೇವೆ ಎಂದಿದ್ದರು ಆರ್.ಚಂದ್ರು.